ದೇವಾಲಯಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ಮಾಡುವ ನಾವು ಅಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಗಮನಹರಿಸದಿರುವುದು ಖೇದಕರ. ದೇವಾಲಯದಲ್ಲಿರುವ ಶಿಲಾಶಾಸನಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ದೇವಾಲಯಗಳಲ್ಲಿರುವ ಶಾಸನಗಳ ಅಧ್ಯಯನಕ್ಕೆ ಪುರಾತತ್ವ ಸಂಶೋಧಕರಿಗೆ ಅನುಮತಿಪತ್ರ ಪಡೆಯಬೇಕೆನ್ನುವ ನೆಪದಲ್ಲಿ ಅಡ್ಡಿಯಾದರೆ, ಅನುಮತಿ ಪಡೆದು ತಿಂಗಳ ಬಳಿಕ ಅಲ್ಲಿಗೆ ತೆರಳಿದರೆ ಶಾಸನಗಳನ್ನೇ ಎಸೆದಿರುವ ಪ್ರಸಂಗಗಳು ನಡೆದಿವೆ. ಇತಿಹಾಸದ ರಕ್ಷಣೆ ಕೇವಲ ಸರ್ಕಾರ, ಪುರಾತ್ವ ಇಲಾಖೆಯದ್ದಲ್ಲ, ಸಾರ್ವಜನಿಕರು, ನಾಗರಿಕರು ಹಾಗೂ ಇತಿಹಾಸಕಾರರ ಜವಾಬ್ದಾರಿಯೂ ಆಗಿದೆ ಎಂದರು.