<p><strong>ಉಡುಪಿ:</strong> ಅನಿವಾರ್ಯ ಕಾರಣಗಳಿಂದಾಗಿ ಆಸ್ಪತ್ರೆಗಳಿಗೆ ಬರಲಾರದೆ ನೊಂದಿರುವ ಜನರಿಗೆ ಮನೆ ಆರೈಕೆ ಸೇವೆ (ಹೋಮ್ ಕೇರ್) ಆರಂಭಿಸುವ ಮೂಲಕ ಮಿಷನ್ ಆಸ್ಪತ್ರೆಯು ಹೊಸ ಹೆಜ್ಜೆ ಇಟ್ಟಿದೆ ಎಂದು ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಹೇಮಚಂದ್ರ ಕುಮಾರ್ ಹೇಳಿದರು.</p>.<p>ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಮನೆ ಆರೈಕೆ ಸೇವೆ ಮತ್ತು ನೇತ್ರಶಾಸ್ತ್ರ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಆರೈಕೆ ಸೇವೆಯ ಮೂಲಕ ಮನೆ ಮನೆಗೆ ಆರೋಗ್ಯ ಸೇವೆ ತಲುಪಿ, ಆಸ್ಪತ್ರೆಯು ಜಿಲ್ಲೆಗೆ ಮಾದರಿಯಾಗಲಿ ಎಂದರು.</p>.<p>ಮಿಷನ್ ಆಸ್ಪತ್ರೆಯು ಉಡುಪಿಯಲ್ಲಿ ಆರಂಭಗೊಳ್ಳುವುದಕ್ಕೆ ನಿಯೋಗವಿದೆ. ಇಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡಬೇಕೆನ್ನುವುದು ಆ ನಿಯೋಗವಾಗಿದೆ. ಆಸ್ಪತ್ರೆಯು ಸಮಾಜಮುಖಿ ಸೇವೆಗಳನ್ನು ದಿಟ್ಟತನದಿಂದ ಜಾರಿಗೊಳಿಸುತ್ತಿದೆ. ಒಬ್ಬ ವ್ಯಕ್ತಿಗೆ ದೃಷ್ಟಿ ನೀಡುವುದೆಂದರೆ ಆತನಿಗೆ ಜೀವ ನೀಡಿದಂತೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ವಿಭಾಗ ಆರಂಭಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.</p>.<p>ನೇತ್ರತಜ್ಞ ಡಾ.ನರೇಂದ್ರ ಶೆಣೈ ಮಾತನಾಡಿ, ಮನೆ ಮನೆಗೆ ತೆರಳಿ ಅಸಹಾಯಕರಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಆರಂಭಿಸಿರುವುದು ಶ್ಲಾಘನೀಯ. ಈ ಯೋಜನೆಯು ಇಂದು ಸಮಾಜಕ್ಕೆ ಅಗತ್ಯವಾಗಿದೆ ಎಂದರು.</p>.<p>ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತನ್ನ ಮಾತನಾಡಿ, ರಕ್ತ ತಪಾಸಣೆ, ನರ್ಸಿಂಗ್ ಕೇರ್, ಪಿಸಿಯೋಥೆರಪಿ ಮೊದಲಾದವುಗಳು ಮನೆ ಆರೈಕೆ ಯೋಜನೆಯಲ್ಲಿ ಒಳಗೊಂಡಿವೆ. ಇದರಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.</p>.<p>ಆಸ್ಪತ್ರೆಯ ವೈದ್ಯ ಡಾ. ಗಣೇಶ್ ಕಾಮತ್ ಅವರು ಮನೆ ಮನೆಗೆ ತೆರಳಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ ಎಂದು ವಿವರಿಸಿದರು.</p>.<p>ಸಿಎಸ್ಐ ವಲಯ ಅಧ್ಯಕ್ಷ ಐವನ್ ಡಿ. ಸೋನ್ಸ್ , ಡಾ.ಆರ್ಥುರ್ ರೊಡ್ರಿಗಸ್, ಸಿಎಸ್ಐ ಸಭಾ ಮಹಿಳಾ ಅನ್ಯೋನ್ಯ ಕೂಟದ ಅಧ್ಯಕ್ಷೆ ಭಾರತಿ ಹೇಮಚಂದ್ರ ಇದ್ದರು.</p>.<blockquote>ಮನೆ ಬಾಗಿಲಿಗೆ ಆರೋಗ್ಯ ಸೇವೆ ಮಿಷನ್ ಆಸ್ಪತ್ರೆಯಿಂದ ವಿನೂತನ ಯೋಜನೆ ಜಾರಿ ಹಿರಿಯ ನಾಗರಿಕರಿಗೆ ಅನುಕೂಲ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಅನಿವಾರ್ಯ ಕಾರಣಗಳಿಂದಾಗಿ ಆಸ್ಪತ್ರೆಗಳಿಗೆ ಬರಲಾರದೆ ನೊಂದಿರುವ ಜನರಿಗೆ ಮನೆ ಆರೈಕೆ ಸೇವೆ (ಹೋಮ್ ಕೇರ್) ಆರಂಭಿಸುವ ಮೂಲಕ ಮಿಷನ್ ಆಸ್ಪತ್ರೆಯು ಹೊಸ ಹೆಜ್ಜೆ ಇಟ್ಟಿದೆ ಎಂದು ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಹೇಮಚಂದ್ರ ಕುಮಾರ್ ಹೇಳಿದರು.</p>.<p>ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಮನೆ ಆರೈಕೆ ಸೇವೆ ಮತ್ತು ನೇತ್ರಶಾಸ್ತ್ರ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಆರೈಕೆ ಸೇವೆಯ ಮೂಲಕ ಮನೆ ಮನೆಗೆ ಆರೋಗ್ಯ ಸೇವೆ ತಲುಪಿ, ಆಸ್ಪತ್ರೆಯು ಜಿಲ್ಲೆಗೆ ಮಾದರಿಯಾಗಲಿ ಎಂದರು.</p>.<p>ಮಿಷನ್ ಆಸ್ಪತ್ರೆಯು ಉಡುಪಿಯಲ್ಲಿ ಆರಂಭಗೊಳ್ಳುವುದಕ್ಕೆ ನಿಯೋಗವಿದೆ. ಇಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡಬೇಕೆನ್ನುವುದು ಆ ನಿಯೋಗವಾಗಿದೆ. ಆಸ್ಪತ್ರೆಯು ಸಮಾಜಮುಖಿ ಸೇವೆಗಳನ್ನು ದಿಟ್ಟತನದಿಂದ ಜಾರಿಗೊಳಿಸುತ್ತಿದೆ. ಒಬ್ಬ ವ್ಯಕ್ತಿಗೆ ದೃಷ್ಟಿ ನೀಡುವುದೆಂದರೆ ಆತನಿಗೆ ಜೀವ ನೀಡಿದಂತೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ವಿಭಾಗ ಆರಂಭಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.</p>.<p>ನೇತ್ರತಜ್ಞ ಡಾ.ನರೇಂದ್ರ ಶೆಣೈ ಮಾತನಾಡಿ, ಮನೆ ಮನೆಗೆ ತೆರಳಿ ಅಸಹಾಯಕರಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಆರಂಭಿಸಿರುವುದು ಶ್ಲಾಘನೀಯ. ಈ ಯೋಜನೆಯು ಇಂದು ಸಮಾಜಕ್ಕೆ ಅಗತ್ಯವಾಗಿದೆ ಎಂದರು.</p>.<p>ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತನ್ನ ಮಾತನಾಡಿ, ರಕ್ತ ತಪಾಸಣೆ, ನರ್ಸಿಂಗ್ ಕೇರ್, ಪಿಸಿಯೋಥೆರಪಿ ಮೊದಲಾದವುಗಳು ಮನೆ ಆರೈಕೆ ಯೋಜನೆಯಲ್ಲಿ ಒಳಗೊಂಡಿವೆ. ಇದರಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.</p>.<p>ಆಸ್ಪತ್ರೆಯ ವೈದ್ಯ ಡಾ. ಗಣೇಶ್ ಕಾಮತ್ ಅವರು ಮನೆ ಮನೆಗೆ ತೆರಳಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ ಎಂದು ವಿವರಿಸಿದರು.</p>.<p>ಸಿಎಸ್ಐ ವಲಯ ಅಧ್ಯಕ್ಷ ಐವನ್ ಡಿ. ಸೋನ್ಸ್ , ಡಾ.ಆರ್ಥುರ್ ರೊಡ್ರಿಗಸ್, ಸಿಎಸ್ಐ ಸಭಾ ಮಹಿಳಾ ಅನ್ಯೋನ್ಯ ಕೂಟದ ಅಧ್ಯಕ್ಷೆ ಭಾರತಿ ಹೇಮಚಂದ್ರ ಇದ್ದರು.</p>.<blockquote>ಮನೆ ಬಾಗಿಲಿಗೆ ಆರೋಗ್ಯ ಸೇವೆ ಮಿಷನ್ ಆಸ್ಪತ್ರೆಯಿಂದ ವಿನೂತನ ಯೋಜನೆ ಜಾರಿ ಹಿರಿಯ ನಾಗರಿಕರಿಗೆ ಅನುಕೂಲ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>