ಬಳಿಕ ರೆಡ್ಕ್ರಾಸ್ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ, ‘ಭಾರತೀಯ ರೆಡ್ಕ್ರಾಸ್ ನಿಯಮಗಳ ಪ್ರಕಾರ ಟ್ರಸ್ಟ್ ರಚಿಸಲು ಅವಕಾಶವಿಲ್ಲದಿದ್ದರೂ ಉಲ್ಲಂಘಿಸಿ ಜ.6, 2020ಕ್ಕೆ ಬಸ್ರೂರು ರಾಜೀವ ಶೆಟ್ಟಿ ಟ್ರಸ್ಟ್ ರಚನೆ ಮಾಡಿದ್ದಾರೆ. ರೆಡ್ಕ್ರಾಸ್ ಚಿಹ್ನೆ ಹಾಗೂ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.