<p><strong>ಉಡುಪಿ: </strong>ನೂರಾರು ವರ್ಷಗಳ ಇತಿಹಾಸ ಇರುವಪರೀಕ ಅರಮನೆಯ ಜಮೀನಿನಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳವನ್ನು ಆಧುನಿಕವಾಗಿ ನಡೆಸುವ ಉದ್ದೇಶವಿದ್ದು, ಇದಕ್ಕೆ ಸರ್ಕಾರದ ಬೆಂಬಲ ಅಗತ್ಯವಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸದಸ್ಯ ವಿಜಯಕುಮಾರ್ ತೆಂಗಿನಮನೆ ಹೇಳಿದರು.</p>.<p>ಬುಧವಾರ ಪರೀಕದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಜೈನರ ಆಳ್ವಿಕೆಯಲ್ಲಿದ್ದ ಪ್ರದೇಶದಲ್ಲಿ 1913ರಲ್ಲಿ ಯೋಜನಾಗಂಧಿ ಹೆಗ್ಗಡ್ತಿ ಅವರು ಅರಮನೆ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿ ಕಂಬಳವನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ದಾಖಲೆಗಳಿವೆ ಎಂದರು</p>.<p>ದೈವರಾಧನೆಯ ಭಾಗವಾಗಿ ಕಂಬಳವು ನಡೆದುಕೊಂಡು ಬಂದಿದ್ದು, ಪ್ರತಿವರ್ಷ 30-40 ಜೋಡಿ ಕೋಣಗಳು ಭಾಗವಹಿಸುತ್ತವೆ. ಹಿರಿಯ, ಕಿರಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ತಲಾ 4 ಗ್ರಾಂ, 2 ಗ್ರಾಂ ಚಿನ್ನದ ಪದಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.ತೀರ್ಪು ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆಲೇಸರ್ ಬೀಮ್ ವ್ಯವಸ್ಥೆ ಮಾಡಲಾಗಿದೆ ಎಂದರು.</p>.<p>ಪರೀಕ ಅರಮನೆಯ ಪ್ರಭಾತ್ ರೈ ಮಾತನಾಡಿ, ಕಂಬಳಕ್ಕೆ ₹ 10 ಲಕ್ಷ ವೆಚ್ಚವಾಗುತ್ತದೆ. ಜಾತಿ–ಮತ ಭೇದವಿಲ್ಲದೆ ಎಲ್ಲರೂ ಕಂಬಳದಲ್ಲಿ ಭಾಗವಹಿಸುತ್ತಾರೆ. ಯುವಕರಲ್ಲಿ ಕ್ರೀಡೆಯ ಜತೆಗೆ ದೈವಾರಾಧನೆಯ ಆಸಕ್ತಿಯೂ ಬೆಳೆಯುತ್ತಿದೆ. ಕಂಬಳ ಉಳಿವಿಗೆ ಸರ್ಕಾರದ ಆರ್ಥಿಕ ನೆರವು ಅಗತ್ಯ ಎಂದರು.</p>.<p><strong>ಕಂಬಳ ನಿಂತಿಲ್ಲ:</strong>ಪೇಟಾ ಸಂಸ್ಥೆ ಕಂಬಳದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ 2016 - 17ರಲ್ಲಿ ಬೇರೆ ಕಡೆಗಳಲ್ಲಿ ಕಂಬಳ ನಿಂತಿದ್ದರೂ, ಶತಮಾನಗಳ ಇತಿಹಾಸ ಇರುವ ಪರೀಕ ಕಂಬಳ ಇದುವರೆಗೂ ನಿಂತಿಲ್ಲ. ಆ ವರ್ಷ ಹೊರಗಿನ ಕೋಣಗಳ ಬದಲಾಗಿ,ಮನೆಯ ಕೋಣಗಳನ್ನು ಗದ್ದೆಗಿಳಿಸಲಾಗಿತ್ತು ಎಂದು ಪ್ರಭಾತ್ ರೈ ಹೇಳಿದರು.</p>.<p>ಸುದ್ದಿಗೋಷ್ಠಿಯಲ್ಲಿ ಅರಮನೆಯ ಚಿತ್ತರಂಜನ್ ರೈ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ, ಸುಫಲ್ ಚಂದ್ರ ರೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ನೂರಾರು ವರ್ಷಗಳ ಇತಿಹಾಸ ಇರುವಪರೀಕ ಅರಮನೆಯ ಜಮೀನಿನಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳವನ್ನು ಆಧುನಿಕವಾಗಿ ನಡೆಸುವ ಉದ್ದೇಶವಿದ್ದು, ಇದಕ್ಕೆ ಸರ್ಕಾರದ ಬೆಂಬಲ ಅಗತ್ಯವಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸದಸ್ಯ ವಿಜಯಕುಮಾರ್ ತೆಂಗಿನಮನೆ ಹೇಳಿದರು.</p>.<p>ಬುಧವಾರ ಪರೀಕದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಜೈನರ ಆಳ್ವಿಕೆಯಲ್ಲಿದ್ದ ಪ್ರದೇಶದಲ್ಲಿ 1913ರಲ್ಲಿ ಯೋಜನಾಗಂಧಿ ಹೆಗ್ಗಡ್ತಿ ಅವರು ಅರಮನೆ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿ ಕಂಬಳವನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ದಾಖಲೆಗಳಿವೆ ಎಂದರು</p>.<p>ದೈವರಾಧನೆಯ ಭಾಗವಾಗಿ ಕಂಬಳವು ನಡೆದುಕೊಂಡು ಬಂದಿದ್ದು, ಪ್ರತಿವರ್ಷ 30-40 ಜೋಡಿ ಕೋಣಗಳು ಭಾಗವಹಿಸುತ್ತವೆ. ಹಿರಿಯ, ಕಿರಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ತಲಾ 4 ಗ್ರಾಂ, 2 ಗ್ರಾಂ ಚಿನ್ನದ ಪದಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.ತೀರ್ಪು ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆಲೇಸರ್ ಬೀಮ್ ವ್ಯವಸ್ಥೆ ಮಾಡಲಾಗಿದೆ ಎಂದರು.</p>.<p>ಪರೀಕ ಅರಮನೆಯ ಪ್ರಭಾತ್ ರೈ ಮಾತನಾಡಿ, ಕಂಬಳಕ್ಕೆ ₹ 10 ಲಕ್ಷ ವೆಚ್ಚವಾಗುತ್ತದೆ. ಜಾತಿ–ಮತ ಭೇದವಿಲ್ಲದೆ ಎಲ್ಲರೂ ಕಂಬಳದಲ್ಲಿ ಭಾಗವಹಿಸುತ್ತಾರೆ. ಯುವಕರಲ್ಲಿ ಕ್ರೀಡೆಯ ಜತೆಗೆ ದೈವಾರಾಧನೆಯ ಆಸಕ್ತಿಯೂ ಬೆಳೆಯುತ್ತಿದೆ. ಕಂಬಳ ಉಳಿವಿಗೆ ಸರ್ಕಾರದ ಆರ್ಥಿಕ ನೆರವು ಅಗತ್ಯ ಎಂದರು.</p>.<p><strong>ಕಂಬಳ ನಿಂತಿಲ್ಲ:</strong>ಪೇಟಾ ಸಂಸ್ಥೆ ಕಂಬಳದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ 2016 - 17ರಲ್ಲಿ ಬೇರೆ ಕಡೆಗಳಲ್ಲಿ ಕಂಬಳ ನಿಂತಿದ್ದರೂ, ಶತಮಾನಗಳ ಇತಿಹಾಸ ಇರುವ ಪರೀಕ ಕಂಬಳ ಇದುವರೆಗೂ ನಿಂತಿಲ್ಲ. ಆ ವರ್ಷ ಹೊರಗಿನ ಕೋಣಗಳ ಬದಲಾಗಿ,ಮನೆಯ ಕೋಣಗಳನ್ನು ಗದ್ದೆಗಿಳಿಸಲಾಗಿತ್ತು ಎಂದು ಪ್ರಭಾತ್ ರೈ ಹೇಳಿದರು.</p>.<p>ಸುದ್ದಿಗೋಷ್ಠಿಯಲ್ಲಿ ಅರಮನೆಯ ಚಿತ್ತರಂಜನ್ ರೈ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ, ಸುಫಲ್ ಚಂದ್ರ ರೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>