ಅನಿಲ್ (46) ಮೃತಪಟ್ಟವರು. ಅವರು ಪಿತ್ರೋಡಿಯ ವಾಸು ಎಂಬುವರಿಗೆ ಸೇರಿದ ದೋಣಿಯಲ್ಲಿ ಭರತೇಶ ಎಂಬುವವರೊಂದಿಗೆ ಮೀನಿಗಾರಿಕೆಗೆ ಹೋಗಿದ್ದರು. ಉದ್ಯಾವರ ಗ್ರಾಮದ ಪಿತ್ರೋಡಿ ಎಂಬಲ್ಲಿ ಪಾಪನಾಶಿನಿ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ಅನಿಲ್ ಆಯತಪ್ಪಿ ದೋಣಿಯೊಳಗೆ ಅಳವಡಿಸಿದ ವಾಡಿ ಮೇಲೆ ತಲೆ ಕೆಳಗಾಗಿ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.