<p><strong>ಕಾಪು (ಪಡುಬಿದ್ರಿ)</strong>: ಪುರಸಭೆಗೆ ಸೇರಿದ ಜಾಗದಲ್ಲಿ ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟಡದ ಮುಂಭಾಗವನ್ನು ಮುಖ್ಯಾಧಿಕಾರಿ ನಾಗರಾಜ್ ಅವರ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು.</p>.<p>10 ಸೆಂಟ್ಸ್ ಜಮೀನನ್ನು ಬಸ್ ನಿಲ್ದಾಣ ಕಟ್ಟಡದ ಉದ್ದೇಶಕ್ಕಾಗಿ ಕಾಪು ಪಂಚಾಯಿತಿ ಬೋರ್ಡ್ ಹೆಸರಿಗೆ ಧರ್ಮಸಾಧನ ಹಕ್ಕಿನಂತೆ ನೀಡಲಾಗಿತ್ತು. ಆ ಜಮೀನು ಈಗ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಅದರಲ್ಲಿ ಅತಿಕ್ರಮಣವಾಗಿರುವ ಭಾಗವನ್ನು ತೆರವುಗೊಳಿಸಲು ತಹಶೀಲ್ದಾರ್ ಪುರಸಭೆಗೆ ನಿರ್ದೇಶನ ನೀಡಿದ್ದರು.</p>.<p>ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡ ತೆರವು ಕುರಿತು ಸದಸ್ಯ ಅಮೀರ್ ಅವರು ಗುರುವಾರ ನಡೆದ ಪುರಸಭೆ ಮಾಸಿಕ ಸಭೆಯಲ್ಲಿ ಆಗ್ರಹಿಸಿದ್ದರು. ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಅನಧಿಕೃತ ಕಟ್ಟಡ ತೆರವಿಗೆ ಸಾರ್ವಜನಿಕರಿಂದಲೂ ಭಾರಿ ವಿರೋಧ ವ್ಯಕ್ತವಾಗಿತ್ತು.</p>.<p>ಶುಕ್ರವಾರ ಮಧ್ಯಾಹ್ನ ಜೆಸಿಬಿ ಯಂತ್ರದ ಮೂಲಕ ಕಟ್ಟಡದ ಮುಂಭಾಗ ತೆರವುಗೊಳಿಸಲಾಯಿತು. ಈ ವೇಳೆ ಕಟ್ಟಡ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳು ಲೆಕ್ಕಿಸದೆ ರಸ್ತೆ ಮೇಲೆ ಅಳವಡಿಸಿದ್ದ ಇಂಟರ್ಲಾಕ್, ಮುಂಭಾಗ ತೆರವುಗೊಳಿಸಿದರು. ತೆರವು ಕಾರ್ಯದಲ್ಲಿ ಅಧಿಕಾರಿಗಳಾದ ನಯನ ತಾರಾ, ಕಂದಾಯ ಇಲಾಖೆಯ ಶಶಿಕಲಾ, ದಿನೇಶ್, ಪೌರ ಕಾರ್ಮಿಕರು ಭಾಗವಹಿಸಿದ್ದರು.</p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್, ‘ಏಕಾಏಕಿ ನನ್ನ ವಾರ್ಡ್ನಲ್ಲಿರುವ ಕಟ್ಟಡ ಕೆಡವಿರುವುದು ಸರಿಯಲ್ಲ. ಕಾಪು ಪೇಟೆಯಲ್ಲಿ ಇತರ ಅನಧಿಕೃತ ಕಟ್ಟಡಗಳೂ ಇವೆ, ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಪು (ಪಡುಬಿದ್ರಿ)</strong>: ಪುರಸಭೆಗೆ ಸೇರಿದ ಜಾಗದಲ್ಲಿ ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟಡದ ಮುಂಭಾಗವನ್ನು ಮುಖ್ಯಾಧಿಕಾರಿ ನಾಗರಾಜ್ ಅವರ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸಲಾಯಿತು.</p>.<p>10 ಸೆಂಟ್ಸ್ ಜಮೀನನ್ನು ಬಸ್ ನಿಲ್ದಾಣ ಕಟ್ಟಡದ ಉದ್ದೇಶಕ್ಕಾಗಿ ಕಾಪು ಪಂಚಾಯಿತಿ ಬೋರ್ಡ್ ಹೆಸರಿಗೆ ಧರ್ಮಸಾಧನ ಹಕ್ಕಿನಂತೆ ನೀಡಲಾಗಿತ್ತು. ಆ ಜಮೀನು ಈಗ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಅದರಲ್ಲಿ ಅತಿಕ್ರಮಣವಾಗಿರುವ ಭಾಗವನ್ನು ತೆರವುಗೊಳಿಸಲು ತಹಶೀಲ್ದಾರ್ ಪುರಸಭೆಗೆ ನಿರ್ದೇಶನ ನೀಡಿದ್ದರು.</p>.<p>ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡ ತೆರವು ಕುರಿತು ಸದಸ್ಯ ಅಮೀರ್ ಅವರು ಗುರುವಾರ ನಡೆದ ಪುರಸಭೆ ಮಾಸಿಕ ಸಭೆಯಲ್ಲಿ ಆಗ್ರಹಿಸಿದ್ದರು. ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಅನಧಿಕೃತ ಕಟ್ಟಡ ತೆರವಿಗೆ ಸಾರ್ವಜನಿಕರಿಂದಲೂ ಭಾರಿ ವಿರೋಧ ವ್ಯಕ್ತವಾಗಿತ್ತು.</p>.<p>ಶುಕ್ರವಾರ ಮಧ್ಯಾಹ್ನ ಜೆಸಿಬಿ ಯಂತ್ರದ ಮೂಲಕ ಕಟ್ಟಡದ ಮುಂಭಾಗ ತೆರವುಗೊಳಿಸಲಾಯಿತು. ಈ ವೇಳೆ ಕಟ್ಟಡ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳು ಲೆಕ್ಕಿಸದೆ ರಸ್ತೆ ಮೇಲೆ ಅಳವಡಿಸಿದ್ದ ಇಂಟರ್ಲಾಕ್, ಮುಂಭಾಗ ತೆರವುಗೊಳಿಸಿದರು. ತೆರವು ಕಾರ್ಯದಲ್ಲಿ ಅಧಿಕಾರಿಗಳಾದ ನಯನ ತಾರಾ, ಕಂದಾಯ ಇಲಾಖೆಯ ಶಶಿಕಲಾ, ದಿನೇಶ್, ಪೌರ ಕಾರ್ಮಿಕರು ಭಾಗವಹಿಸಿದ್ದರು.</p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್, ‘ಏಕಾಏಕಿ ನನ್ನ ವಾರ್ಡ್ನಲ್ಲಿರುವ ಕಟ್ಟಡ ಕೆಡವಿರುವುದು ಸರಿಯಲ್ಲ. ಕಾಪು ಪೇಟೆಯಲ್ಲಿ ಇತರ ಅನಧಿಕೃತ ಕಟ್ಟಡಗಳೂ ಇವೆ, ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>