ಈಚೆಗೆ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆರೋಪಗಳಿಗೆ ಅಮ್ಮುಂಜೆಯ ನಿವಾಸದಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಪಕ್ಷ ಕಟ್ಟಿದ್ದಕ್ಕೆ ಪ್ರತಿಯಾಗಿ ಹುದ್ದೆ ಸಿಕ್ಕಿದೆಯಷ್ಟೆ. ಸಚಿವ ಸ್ಥಾನವನ್ನು ಲಂಚ ಪಡೆಯಲು, ಸ್ವಜನ ಪಕ್ಷಪಾತ ಮಾಡಲು ಬಳಸಿಲ್ಲ. ಜನರ ಸೇವೆಗೆ ಉಪಯೋಗಿಸಿದ್ದೇನೆ ಎಂದು ತಿರುಗೇಟು ನೀಡಿದರು.