ಬಾಳೆ ಎಲೆಗಳ ಕೊರತೆಯಾಗಬಾರದು ಎಂದು ಬಾಳೆ ಮುಹೂರ್ತ, ಉರುವಲಿಗೆ ಕಟ್ಟಿಗೆ ಕೊರತೆಯಾಗಬಾರದು ಎಂದು ಕಟ್ಟಿಗೆ ಮುಹೂರ್ತ, ಆಹಾರ ಪದಾರ್ಥಗಳ ಅಭಾವ ಎದುರಾಗಬಾರದು ಎಂದು ಅಕ್ಕಿ ಹಾಗೂ ಭತ್ತ ಮುಹೂರ್ತ ನಡೆಯುತ್ತದೆ. ಕೃಷ್ಣಾಪುರ ಮಠ ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮೂಹೂರ್ತ ಮುಗಿಸಿದ್ದು, ಭತ್ತದ ಮುಹೂರ್ತ ಮಾತ್ರ ಬಾಕಿ ಇದೆ.