ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಋತು ಆರಂಭದಲ್ಲೇ ತೂಫಾನ್ ಏಟು: ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ದೋಣಿಗಳು

ನವೀನ್‌ ಕುಮಾರ್‌ ಜಿ.
Published : 4 ಸೆಪ್ಟೆಂಬರ್ 2025, 4:53 IST
Last Updated : 4 ಸೆಪ್ಟೆಂಬರ್ 2025, 4:53 IST
ಫಾಲೋ ಮಾಡಿ
Comments
ಕೆಲವೊಮ್ಮೆ ಮೀನುಗಾರಿಕೆಗೆ ತೆರಳಿದಾಗ ಅತಿಯಾಗಿ ತೂಫಾನ್ ಬೀಸಿದರೆ ಮರಳಿ ಬರುತ್ತೇವೆ. ಇಂತಹ ಸಂದರ್ಭದಲ್ಲಿ ಡೀಸೆಲ್‌ಗೆ ಹಾಕಿದ ಹಣವುವೂ ನಷ್ಟವಾಗುತ್ತದೆ
ರತನ್ ಮೀನುಗಾರ ಮಲ್ಪೆ
ಮೀನುಗಾರಿಕಾ ದೋಣಿಗಳು ಕಡಲಿಗಿಳಿದರೆ ಮಾತ್ರ ನಮಗೂ ಕೆಲಸ ಸಿಗುತ್ತದೆ. ನಾವು ಬಂದರಿನಲ್ಲಿ ಮೀನುಗಾರಿಕಾ ಕೆಲಸ ಮಾಡುತ್ತಿದ್ದು ಕಳೆದೊಂದು ವಾರದಿಂದ ಕೆಲಸವಿಲ್ಲದೆ ಸುಮ್ಮನೆ ಕೂತಿದ್ದೇವೆ
ಸುರೇಶ್ ಕಾರ್ಮಿಕ ದಾವಣಗೆರೆ
‘ಶೇ 25ರಷ್ಟು ದೋಣಿಗಳಷ್ಟೇ ಕಡಲಿಗಿಳಿದಿವೆ’
ಈ ಸಲ ಮಲ್ಪೆ ಬಂದರಿನ ಯಾಂತ್ರೀಕೃತ ದೋಣಿಗಳಲ್ಲಿ ಶೇ 25ರಷ್ಟು ದೋಣಿಗಳಷ್ಟೇ ಮೀನುಗಾರಿಕೆಗೆ ತೆರಳಿದ್ದವು. ಆದರೆ ಪದೇ ಪದೇ ಜೋರಾಗಿ ಗಾಳಿ ಬೀಸಿರುವುದರಿಂದ ಅವರಿಗೂ ಸಮಸ್ಯೆಯಾಗಿದೆ. ಕೆಲವರು ಮೀನುಗಾರಿಕೆಗೆ ತೆರಳಿ ಗಾಳಿಯಿಂದಾಗಿ ಎರಡೇ ದಿನಕ್ಕೆ ವಾಪಸ್‌ ಬಂದಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ತಿಳಿಸಿದರು. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ದೋಣಿಗಳಲ್ಲಿ ಕೆಲವು ದೋಣಿಗಳು ಗಾಳಿಯ ಕಾರಣಕ್ಕಾಗಿ ಕಾರವಾರದ ಬಂದರಿಗೆ ತೆರಳಿ ಲಂಗರು ಹಾಕಿವೆ. ಪದೇ ಪದೇ ತೂಫಾನ್‌ ಬೀಸುತ್ತಿರುವುದರಿಂದ ಕೆಲವು ದೋಣಿಯವರು ಕಡಲಿಗಿಳಿದೇ ಇಲ್ಲ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT