ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ಬಾರ್ಕೂರು ವಹಿಸಿದ್ದರು. ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಕಾರ್ಕಳ, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಪ್ರತಿಷ್ಠಾನದ ವಿಶ್ವಸ್ಥರಾದ ಜಯಕರ ಪುರೋಹಿತ್ ಮೂಡಬಿದಿರೆ, ಶ್ರೀಧರ ಶರ್ಮಾ ಕಟಪಾಡಿ, ಲಕ್ಷ್ಮಿಕಾಂತ ಶರ್ಮಾ ತಂತ್ರಿ ಸಾಲಿಗ್ರಾಮ, ಅಕ್ಷಯ ಶರ್ಮಾ ಕಟಪಾಡಿ, ಪ್ರಕಾಶ ಶರ್ಮಾ ಬಾರ್ಕೂರು, ಗಿರೀಶ ಶರ್ಮಾ ನಾಕೂರು, ಪ್ರಶಾಂತ ಶರ್ಮಾ ಆಲೂರು, ಕೇಶವ ಶರ್ಮಾ ಭಾಗವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಎಂ. ಗಂಗಾಧರ ಕೊಂಡೆವೂರು ವಂದಿಸಿದರು.