<p><strong>ಉಡುಪಿ: </strong>ಪ್ರಸ್ತುತ ಯಕ್ಷಗಾನ ಬಹುವಿಧವಾಗಿ ಬೆಳೆದು ನಿಂತಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ವಿಮರ್ಶಾ ಪಂಥಕ್ಕೂ ಯಕ್ಷಗಾನಕ್ಕೂ ಸಂಬಂಧವಿಲ್ಲದಂತಾಗಿದ್ದು, ಯಕ್ಷಗಾನದಲ್ಲಿ ವಿಮರ್ಶಾ ಪಂಥ ಬೆಳೆದರೆ ಮುಳಿಯ ತಿಮ್ಮಪ್ಪಯ್ಯನವರಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.</p>.<p>ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಕೊಡಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.</p>.<p>ಸಾಮೂಹಿಕವಾಗಿದ್ದ ಯಕ್ಷಗಾನ ವೈಯಕ್ತಿಕವಾಗುತ್ತಿರುವ ಕಾಲಘಟ್ಟದಲ್ಲಿ ತಿಮ್ಮಪ್ಪಯ್ಯನವರ ವ್ಯಕ್ತಿತ್ವ, ಯೋಗ್ಯತೆ, ಕೃತಿಗಳು ಹಾಗೂ ಬದುಕಿದ ರೀತಿ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.</p>.<p>ಸಂಸ್ಕೃತ ವಿದ್ವಾಂಸರಾಗಿದ್ದ ತಿಮ್ಮಪ್ಪಯ್ಯನವರು ಕನ್ನಡದಲ್ಲಿ ಸಂಸ್ಕೃತದ ಅತಿರೇಕದ ಬಳಕೆ ತೊಂದರೆ ಎಂದು ಹೇಳಿದ್ದರು. ಜತೆಗೆ, ಕನ್ನಡಾಂತರ್ಗತ ತುಳುವನ್ನು ಬಲವಾಗಿ ಪ್ರತಿಪಾದನೆ ಮಾಡಿದ್ದರು ಎಂದರು.</p>.<p>ಯೋಗ್ಯತೆಗೂ ಮೀರಿದ ಮನ್ನಣೆ ನನಗೆ ಸಿಕ್ಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಣ್ಣ ಸಾಧನೆಗೆ ಮುಳಿಯ ತಿಮ್ಮಪ್ಪಯ್ಯನವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಸಂತಸವಾಗಿದೆ. ಕರಾವಳಿಯ ಜನರು ತೋರಿಸಿದ ಪ್ರೀತಿಗೆ ಋಣಿಯಾಗಿದ್ದೇನೆ ಎಂದರು.</p>.<p>ವಿದ್ವಾಂಸರಾದ ಪ್ರೊ.ಬಿ.ಎ. ವಿವೇಕ ರೈ ಮಾತನಾಡಿ, ಸಂಶೋಧನೆಗಳಿಗೆ ಅಲ್ಪ ಅಥವಾ ಅರ್ಧ ವಿರಾಮಗಳಿಲ್ಲ. ಕೊನೆ ಕ್ಷಣದವರೆಗೂ ನಡೆಯವಂಥದ್ದು ಸಂಶೋಧನೆ. ಉಜಿರೆ, ಮಂಗಳೂರು, ಉಡುಪಿಯ ಸಂಶೋಧನಾ ಕೇಂದ್ರಗಳಲ್ಲಿ ನಿರಂತರ ಸಂಶೋಧನಾ ಚಟುವಟಿಕೆಗಳು ನಡೆಯಬೇಕು ಎಂದರು.</p>.<p>ಜಾತಿ ಎನ್ನುವುದು ಕಠಾರಿಯೂ, ಗುರಾಣಿಯೂ ಆಗಿರುವ ಇಂದಿನ ಸಂದರ್ಭದಲ್ಲಿ ಬರಹಗಳಲ್ಲಿ ಜಾತಿಯ ವಿಮರ್ಶೆಗೂ ತೊಡಗಿಕೊಂಡ ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯವನ್ನು ಅವಲೋಕಿಸಬೇಕಿದೆ. ಅವರಅಧ್ಯಯನ ಮಾದರಿ ಅನುಕರಣೆಯಾಗಬೇಕು ಎಂದರು.</p>.<p>ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲದ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್, ಪ್ರೊ.ಎಂ.ಎಲ್. ಸಾಮಗ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಮಾತನಾಡಿದರು.</p>.<p>ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಮನೋರಮ ಎಂ.ಭಟ್, ಮುಳಿಯ ತಿಮ್ಮಪ್ಪಯ್ಯನವರ ಮಕ್ಕಳಾದ ಗೋಪಾಲಕೃಷ್ಣ ಭಟ್, ಮುಳಿಯ ರಾಘವಯ್ಯ ಉಪಸ್ಥಿತರಿದ್ದರು. ಭ್ರಮರಿ ಶಿವಪ್ರಕಾಶ ಸ್ವಾಗತ ಗೀತೆ ಹಾಡಿದರು. ಸುಶ್ಮಿತಾ ವಂದಿಸಿದರು. ಡಾ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಪ್ರಸ್ತುತ ಯಕ್ಷಗಾನ ಬಹುವಿಧವಾಗಿ ಬೆಳೆದು ನಿಂತಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ವಿಮರ್ಶಾ ಪಂಥಕ್ಕೂ ಯಕ್ಷಗಾನಕ್ಕೂ ಸಂಬಂಧವಿಲ್ಲದಂತಾಗಿದ್ದು, ಯಕ್ಷಗಾನದಲ್ಲಿ ವಿಮರ್ಶಾ ಪಂಥ ಬೆಳೆದರೆ ಮುಳಿಯ ತಿಮ್ಮಪ್ಪಯ್ಯನವರಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.</p>.<p>ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಕೊಡಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.</p>.<p>ಸಾಮೂಹಿಕವಾಗಿದ್ದ ಯಕ್ಷಗಾನ ವೈಯಕ್ತಿಕವಾಗುತ್ತಿರುವ ಕಾಲಘಟ್ಟದಲ್ಲಿ ತಿಮ್ಮಪ್ಪಯ್ಯನವರ ವ್ಯಕ್ತಿತ್ವ, ಯೋಗ್ಯತೆ, ಕೃತಿಗಳು ಹಾಗೂ ಬದುಕಿದ ರೀತಿ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.</p>.<p>ಸಂಸ್ಕೃತ ವಿದ್ವಾಂಸರಾಗಿದ್ದ ತಿಮ್ಮಪ್ಪಯ್ಯನವರು ಕನ್ನಡದಲ್ಲಿ ಸಂಸ್ಕೃತದ ಅತಿರೇಕದ ಬಳಕೆ ತೊಂದರೆ ಎಂದು ಹೇಳಿದ್ದರು. ಜತೆಗೆ, ಕನ್ನಡಾಂತರ್ಗತ ತುಳುವನ್ನು ಬಲವಾಗಿ ಪ್ರತಿಪಾದನೆ ಮಾಡಿದ್ದರು ಎಂದರು.</p>.<p>ಯೋಗ್ಯತೆಗೂ ಮೀರಿದ ಮನ್ನಣೆ ನನಗೆ ಸಿಕ್ಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಣ್ಣ ಸಾಧನೆಗೆ ಮುಳಿಯ ತಿಮ್ಮಪ್ಪಯ್ಯನವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಸಂತಸವಾಗಿದೆ. ಕರಾವಳಿಯ ಜನರು ತೋರಿಸಿದ ಪ್ರೀತಿಗೆ ಋಣಿಯಾಗಿದ್ದೇನೆ ಎಂದರು.</p>.<p>ವಿದ್ವಾಂಸರಾದ ಪ್ರೊ.ಬಿ.ಎ. ವಿವೇಕ ರೈ ಮಾತನಾಡಿ, ಸಂಶೋಧನೆಗಳಿಗೆ ಅಲ್ಪ ಅಥವಾ ಅರ್ಧ ವಿರಾಮಗಳಿಲ್ಲ. ಕೊನೆ ಕ್ಷಣದವರೆಗೂ ನಡೆಯವಂಥದ್ದು ಸಂಶೋಧನೆ. ಉಜಿರೆ, ಮಂಗಳೂರು, ಉಡುಪಿಯ ಸಂಶೋಧನಾ ಕೇಂದ್ರಗಳಲ್ಲಿ ನಿರಂತರ ಸಂಶೋಧನಾ ಚಟುವಟಿಕೆಗಳು ನಡೆಯಬೇಕು ಎಂದರು.</p>.<p>ಜಾತಿ ಎನ್ನುವುದು ಕಠಾರಿಯೂ, ಗುರಾಣಿಯೂ ಆಗಿರುವ ಇಂದಿನ ಸಂದರ್ಭದಲ್ಲಿ ಬರಹಗಳಲ್ಲಿ ಜಾತಿಯ ವಿಮರ್ಶೆಗೂ ತೊಡಗಿಕೊಂಡ ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯವನ್ನು ಅವಲೋಕಿಸಬೇಕಿದೆ. ಅವರಅಧ್ಯಯನ ಮಾದರಿ ಅನುಕರಣೆಯಾಗಬೇಕು ಎಂದರು.</p>.<p>ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲದ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್, ಪ್ರೊ.ಎಂ.ಎಲ್. ಸಾಮಗ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಮಾತನಾಡಿದರು.</p>.<p>ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಮನೋರಮ ಎಂ.ಭಟ್, ಮುಳಿಯ ತಿಮ್ಮಪ್ಪಯ್ಯನವರ ಮಕ್ಕಳಾದ ಗೋಪಾಲಕೃಷ್ಣ ಭಟ್, ಮುಳಿಯ ರಾಘವಯ್ಯ ಉಪಸ್ಥಿತರಿದ್ದರು. ಭ್ರಮರಿ ಶಿವಪ್ರಕಾಶ ಸ್ವಾಗತ ಗೀತೆ ಹಾಡಿದರು. ಸುಶ್ಮಿತಾ ವಂದಿಸಿದರು. ಡಾ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>