<p><strong>ಉಡುಪಿ</strong>: ನಗರದ ನಿಟ್ಟೂರಿನಲ್ಲಿ ಕಾರ್ಯಾಚರಿಸುವ ನಗರಸಭೆಯ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆಯು ಸಮೀಪ ವಾಸಿಗಳಿಗೆ ಬದುಕನ್ನು ದುಸ್ತರವಾಗಿಸಿ, ವರ್ಷಗಳೇ ಕಳೆದರೂ ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ.</p>.<p>ಈ ಘಟಕದಿಂದ ಹೊರಹೊಮ್ಮುವ ದುರ್ವಾಸನೆಯು ಉಡುಪಿ– ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರ ಮೂಗಿಗೂ ಬಡಿಯುತ್ತಿದೆ.</p>.<p>ನಗರ ವ್ಯಾಪ್ತಿಯ ಒಳಚರಂಡಿಗಳ ನೀರನ್ನು ಶುದ್ಧೀಕರಿಸುವ ಈ ಘಟಕವು ತಾಂತ್ರಿಕವಾಗಿ ಮೇಲ್ದರ್ಜೆಗೇರದಿರುವುದು ಈ ಅವ್ಯವಸ್ಥೆಗೆಲ್ಲ ಕಾರಣವಾಗಿದೆ ಎಂದು ಜನರು ದೂರುತ್ತಾರೆ.</p>.<p>ಈ ಕೊಳಚೆ ನೀರು ಶುದ್ಧೀಕರಣ ಘಟಕದ ಸುತ್ತಲೂ ಹಲವು ಬಡವಾಣೆಗಳಿದ್ದು, ಅದರಲ್ಲಿ ನೂರಾರು ಜನರು ವಾಸಿಸುತ್ತಿದ್ದಾರೆ. ಸಮೀಪದಲ್ಲೇ ವಾಣಿಜ್ಯ ಕಟ್ಟಡಗಳು, ಆಟೊ ನಿಲ್ದಾಣ, ಅಂಗನವಾಡಿಗಳೂ ಇವೆ.</p>.<p>ಘಟಕದಿಂದ ನಿರಂತರವಾಗಿ ದುರ್ವಾಸನೆ ಹೊರಹೊಮ್ಮುತ್ತಿರುತ್ತದೆ. ಕೆಲವು ಸಂದರ್ಭದಲ್ಲಿ ಅದು ಸಹಿಸಲು ಸಾಧ್ಯವಾಗದಷ್ಟಿರುತ್ತದೆ ಎನ್ನುತ್ತಾರೆ ಸ್ಥಳೀಯರು.</p>.<p>ಈ ಘಟಕದ ವೆಟ್ವೆಲ್ಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಇದರಿಂದ ಕೊಳಚೆ ನೀರು ಶುದ್ಧೀಕರಣವಾಗುತ್ತಿಲ್ಲ. ಇದು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಜನರು ದೂರುತ್ತಾರೆ.</p>.<p>ಘಟಕದಲ್ಲಿ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಇಂದ್ರಾಣಿ ನದಿಯ ಮೂಲಕ ಸಮುದ್ರಕ್ಕೆ ಹರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳುತ್ತಾರೆ.</p>.<p>2007ರಲ್ಲಿ ಕುಡ್ಸೆಂಪ್ ₹5.5 ಕೋಟಿ ವೆಚ್ಚದಲ್ಲಿ ಎಡಿಬಿ ಅನುದಾನದ ಅಡಿಯಲ್ಲಿ ನಿಟ್ಟೂರಿನ 10 ಎಕರೆ ಪ್ರದೇಶದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಪ್ರತಿದಿನ 12 ಎಂಎಲ್ಡಿ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.</p>.<p>ಮಳೆಗಾಲದಲ್ಲಿ ದುರ್ವಾಸನೆ ಸ್ವಲ್ಪ ಕಡಿಮೆಯಾದರೂ, ಚಳಿಗಾಲ, ಬೇಸಿಗೆ ಬಂದಾಗ ಅದರ ತೀವ್ರತೆ ಹೆಚ್ಚಾಗಿ ಬದುಕೇ ಅಸಹನೀಯವಾಗುತ್ತದೆ. ಸಂಬಂಧಪಟ್ಟವರು ಇನ್ನಾದರೂ ಈ ಘಟಕವು ಸೂಕ್ತ ರೀತಿಯಲ್ಲಿ ಕಾರ್ಯಾಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.</p>.<p>ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆ ನಗರಸಭೆಯ ಹಲವು ಸಾಮಾನ್ಯ ಸಭೆಗಳಲ್ಲಿ ಚರ್ಚೆಗಳು ನಡೆದಿದ್ದರೂ ಸಮಸ್ಯೆ ಮಾತ್ರ ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಸಮಸ್ಯೆ ಪರಿಹರಿಸಲು ಯಾರೂ ಮುತುವರ್ಜಿ ವಹಿಸಿಲ್ಲ ಎಂದು ಜನರು ದೂರಿದ್ದಾರೆ.</p>.<div><blockquote>ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆ ನಿರಂತರ ಮೂಗಿಗೆ ಬಡಿದು ಈಗ ನನಗೆ ಎಷ್ಟೇ ದುರ್ವಾಸನೆ ಇದ್ದರೂ ಗೊತ್ತಾಗದ ಸ್ಥಿತಿ ಉಂಟಾಗಿದೆ.</blockquote><span class="attribution">– ಶೇಖರ್, ಸ್ಥಳೀಯ ನಿವಾಸಿ</span></div>.<div><blockquote>ಕೆಲವೊಮ್ಮೆ ಸಂಜೆ ವೇಳೆ ಹೊಟ್ಟೆ ತೊಳೆಸುವಂತಹ ದುರ್ವಾಸನೆ ಬರುತ್ತದೆ. ನಿರಂತರ ದುರ್ವಾಸನೆಯಿಂದಾಗಿ ಯಾವುದಾದರೂ ಕಾಯಿಲೆ ಬರಬಹುದೆಂಬ ಭಯ ಕಾಡುತ್ತಿದೆ</blockquote><span class="attribution">– ಸುನಿತಾ, ಸ್ಥಳೀಯ ನಿವಾಸಿ</span></div>.<div><blockquote>ಜೋರು ಮಳೆ ಬರುವಾಗ ಘಟಕದ ಹೊರಭಾಗದಲ್ಲಿರುವ ಚರಂಡಿಯಲ್ಲೂ ಕೊಳಚೆ ನೀರು ಉಕ್ಕಿ ಬರುತ್ತದೆ. ಘಟಕದ ಸುತ್ತಮುತ್ತ ವಾಸಿಸುವವರ ಸ್ಥಿತಿ ಹೇಳ ತೀರದಾಗಿದೆ</blockquote><span class="attribution">– ರವಿ, ಆಟೊ ಚಾಲಕ</span></div>.<p><strong>‘ಎನ್ಜಿಟಿ ನಿಧಿ ಬಳಸಿ ಉನ್ನತೀಕರಣ’</strong></p><p>‘ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಸದ್ಯ ಹಳೆಯ ತಂತ್ರಜ್ಞಾನ ಬಳಸಿ ಕೊಳಚೆ ನೀರು ಶುದ್ಧೀಕರಿಸಲಾಗುತ್ತಿದೆ. ಈ ತಂತ್ರಜ್ಞಾನ ಅಷ್ಟು ಸಮರ್ಥವಾಗಿರದ ಕಾರಣ ಸಮಸ್ಯೆಯಾಗುತ್ತಿದೆ. ಘಟಕದ ತಂತ್ರಜ್ಞಾನವನ್ನು ಉನ್ನತೀಕರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಒಪ್ಪಂದ ಬಾಕಿ ಇದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ₹30 ಕೋಟಿ ಅನುದಾನ ಬಳಸಿ ಘಟಕವನ್ನು ಉನ್ನತೀಕರಿಸಲಾಗುವುದು’ ಎಂದು ನಗರ ಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. </p><p>‘ಎನ್ಜಿಟಿ ಅನುದಾನವಾಗಿರುವುದರಿಂದ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ಮೂಲಕ ಕಾಮಗಾರಿ ನಡೆಸಬೇಕಾಗಿದೆ. ಈ ಮೂಲಕ ಹೈಟೆಕ್ ತಂತ್ರಜ್ಞಾನವನ್ನು ಬಳಸಲಾಗುವುದು’ ಎಂದರು. </p><p>‘ಬಯೋ ಕಲ್ಚರ್ ವಿಧಾನದ ಮೂಲಕವೂ ಕೊಳಚೆ ನೀರು ಶುದ್ಧೀಕರಣಕ್ಕೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಚೆನ್ನೈನ ಕಂಪನಿಯೊಂದು ನೀರಿನ ಮಾದರಿಯನ್ನು ಸಂಗ್ರಹಿಸಿ ಕೊಂಡೊಯ್ದಿದೆ. ಈ ವಿಧಾನದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ನೀರು ಶುದ್ಧೀಕರಿಸಲಾಗುತ್ತದೆ. ಕಂಪನಿಯವರು ಒಪ್ಪಿಕೊಂಡರೆ ಆ ವಿಧಾನವನ್ನೂ ಬಳಸಲಾಗುವುದು. ಘಟಕದಲ್ಲಿ ಕೊಳಚೆ ನೀರು ಸಮರ್ಪಕವಾಗಿ ಶುದ್ಧೀಕರಣಗೊಂಡರೆ ಆ ನೀರನ್ನು ಉದ್ಯಾನಗಳಿಗೆ ಬಳಸಬಹುದಾಗಿದೆ. ನದಿಗೂ ಹರಿಸಬಹುದು’ ಎಂದು ಅವರು ಹೇಳಿದರು.</p>.<p><strong>‘ಉತ್ತಮ ಯಂತ್ರಗಳ ಬಳಕೆಯಾಗಲಿ’</strong></p><p><strong>‘</strong>ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದ ಯಂತ್ರಗಳು ಕೆಟ್ಟು ಹೋಗುತ್ತಿರುವುದರಿಂದ ಅದು ಸರಿಯಾಗಿ ಕಾರ್ಯಾಚರಿಸದೆ ದುರ್ವಾಸನೆ ಬೀರುತ್ತಿದೆ. ಯಂತ್ರಗಳು ಕಳಪೆಯಾಗಿರುವ ಸಾಧ್ಯತೆಯೂ ಇದೆ. ಈ ಘಟಕಕ್ಕೆ ಗುಣಮಟ್ಟದ ಯಂತ್ರಗಳನ್ನು ಬಳಸಿ ಕೊಳಚೆ ನೀರು ಶುದ್ಧೀಕರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹೇಳಿದರು.</p><p>‘ಹಲವು ವರ್ಷಗಳಿಂದ ಈ ಘಟಕದ ಸುತ್ತಮುತ್ತ ದುರ್ವಾಸನೆ ಹೊರ ಸೂಸುವ ಸಮಸ್ಯೆ ಇದೆ. ಅಲ್ಲಿನ ಜನರ ಗೋಳು ಹೇಳ ತೀರದಾಗಿದೆ. ರೋಗಭೀತಿಯೂ ಅವರನ್ನು ಕಾಡುತ್ತಿದೆ. ಸಂಬಂಧಪಟ್ವರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ನಗರದ ನಿಟ್ಟೂರಿನಲ್ಲಿ ಕಾರ್ಯಾಚರಿಸುವ ನಗರಸಭೆಯ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆಯು ಸಮೀಪ ವಾಸಿಗಳಿಗೆ ಬದುಕನ್ನು ದುಸ್ತರವಾಗಿಸಿ, ವರ್ಷಗಳೇ ಕಳೆದರೂ ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ.</p>.<p>ಈ ಘಟಕದಿಂದ ಹೊರಹೊಮ್ಮುವ ದುರ್ವಾಸನೆಯು ಉಡುಪಿ– ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರ ಮೂಗಿಗೂ ಬಡಿಯುತ್ತಿದೆ.</p>.<p>ನಗರ ವ್ಯಾಪ್ತಿಯ ಒಳಚರಂಡಿಗಳ ನೀರನ್ನು ಶುದ್ಧೀಕರಿಸುವ ಈ ಘಟಕವು ತಾಂತ್ರಿಕವಾಗಿ ಮೇಲ್ದರ್ಜೆಗೇರದಿರುವುದು ಈ ಅವ್ಯವಸ್ಥೆಗೆಲ್ಲ ಕಾರಣವಾಗಿದೆ ಎಂದು ಜನರು ದೂರುತ್ತಾರೆ.</p>.<p>ಈ ಕೊಳಚೆ ನೀರು ಶುದ್ಧೀಕರಣ ಘಟಕದ ಸುತ್ತಲೂ ಹಲವು ಬಡವಾಣೆಗಳಿದ್ದು, ಅದರಲ್ಲಿ ನೂರಾರು ಜನರು ವಾಸಿಸುತ್ತಿದ್ದಾರೆ. ಸಮೀಪದಲ್ಲೇ ವಾಣಿಜ್ಯ ಕಟ್ಟಡಗಳು, ಆಟೊ ನಿಲ್ದಾಣ, ಅಂಗನವಾಡಿಗಳೂ ಇವೆ.</p>.<p>ಘಟಕದಿಂದ ನಿರಂತರವಾಗಿ ದುರ್ವಾಸನೆ ಹೊರಹೊಮ್ಮುತ್ತಿರುತ್ತದೆ. ಕೆಲವು ಸಂದರ್ಭದಲ್ಲಿ ಅದು ಸಹಿಸಲು ಸಾಧ್ಯವಾಗದಷ್ಟಿರುತ್ತದೆ ಎನ್ನುತ್ತಾರೆ ಸ್ಥಳೀಯರು.</p>.<p>ಈ ಘಟಕದ ವೆಟ್ವೆಲ್ಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಇದರಿಂದ ಕೊಳಚೆ ನೀರು ಶುದ್ಧೀಕರಣವಾಗುತ್ತಿಲ್ಲ. ಇದು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಜನರು ದೂರುತ್ತಾರೆ.</p>.<p>ಘಟಕದಲ್ಲಿ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಇಂದ್ರಾಣಿ ನದಿಯ ಮೂಲಕ ಸಮುದ್ರಕ್ಕೆ ಹರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳುತ್ತಾರೆ.</p>.<p>2007ರಲ್ಲಿ ಕುಡ್ಸೆಂಪ್ ₹5.5 ಕೋಟಿ ವೆಚ್ಚದಲ್ಲಿ ಎಡಿಬಿ ಅನುದಾನದ ಅಡಿಯಲ್ಲಿ ನಿಟ್ಟೂರಿನ 10 ಎಕರೆ ಪ್ರದೇಶದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಪ್ರತಿದಿನ 12 ಎಂಎಲ್ಡಿ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.</p>.<p>ಮಳೆಗಾಲದಲ್ಲಿ ದುರ್ವಾಸನೆ ಸ್ವಲ್ಪ ಕಡಿಮೆಯಾದರೂ, ಚಳಿಗಾಲ, ಬೇಸಿಗೆ ಬಂದಾಗ ಅದರ ತೀವ್ರತೆ ಹೆಚ್ಚಾಗಿ ಬದುಕೇ ಅಸಹನೀಯವಾಗುತ್ತದೆ. ಸಂಬಂಧಪಟ್ಟವರು ಇನ್ನಾದರೂ ಈ ಘಟಕವು ಸೂಕ್ತ ರೀತಿಯಲ್ಲಿ ಕಾರ್ಯಾಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.</p>.<p>ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆ ನಗರಸಭೆಯ ಹಲವು ಸಾಮಾನ್ಯ ಸಭೆಗಳಲ್ಲಿ ಚರ್ಚೆಗಳು ನಡೆದಿದ್ದರೂ ಸಮಸ್ಯೆ ಮಾತ್ರ ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಸಮಸ್ಯೆ ಪರಿಹರಿಸಲು ಯಾರೂ ಮುತುವರ್ಜಿ ವಹಿಸಿಲ್ಲ ಎಂದು ಜನರು ದೂರಿದ್ದಾರೆ.</p>.<div><blockquote>ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆ ನಿರಂತರ ಮೂಗಿಗೆ ಬಡಿದು ಈಗ ನನಗೆ ಎಷ್ಟೇ ದುರ್ವಾಸನೆ ಇದ್ದರೂ ಗೊತ್ತಾಗದ ಸ್ಥಿತಿ ಉಂಟಾಗಿದೆ.</blockquote><span class="attribution">– ಶೇಖರ್, ಸ್ಥಳೀಯ ನಿವಾಸಿ</span></div>.<div><blockquote>ಕೆಲವೊಮ್ಮೆ ಸಂಜೆ ವೇಳೆ ಹೊಟ್ಟೆ ತೊಳೆಸುವಂತಹ ದುರ್ವಾಸನೆ ಬರುತ್ತದೆ. ನಿರಂತರ ದುರ್ವಾಸನೆಯಿಂದಾಗಿ ಯಾವುದಾದರೂ ಕಾಯಿಲೆ ಬರಬಹುದೆಂಬ ಭಯ ಕಾಡುತ್ತಿದೆ</blockquote><span class="attribution">– ಸುನಿತಾ, ಸ್ಥಳೀಯ ನಿವಾಸಿ</span></div>.<div><blockquote>ಜೋರು ಮಳೆ ಬರುವಾಗ ಘಟಕದ ಹೊರಭಾಗದಲ್ಲಿರುವ ಚರಂಡಿಯಲ್ಲೂ ಕೊಳಚೆ ನೀರು ಉಕ್ಕಿ ಬರುತ್ತದೆ. ಘಟಕದ ಸುತ್ತಮುತ್ತ ವಾಸಿಸುವವರ ಸ್ಥಿತಿ ಹೇಳ ತೀರದಾಗಿದೆ</blockquote><span class="attribution">– ರವಿ, ಆಟೊ ಚಾಲಕ</span></div>.<p><strong>‘ಎನ್ಜಿಟಿ ನಿಧಿ ಬಳಸಿ ಉನ್ನತೀಕರಣ’</strong></p><p>‘ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಸದ್ಯ ಹಳೆಯ ತಂತ್ರಜ್ಞಾನ ಬಳಸಿ ಕೊಳಚೆ ನೀರು ಶುದ್ಧೀಕರಿಸಲಾಗುತ್ತಿದೆ. ಈ ತಂತ್ರಜ್ಞಾನ ಅಷ್ಟು ಸಮರ್ಥವಾಗಿರದ ಕಾರಣ ಸಮಸ್ಯೆಯಾಗುತ್ತಿದೆ. ಘಟಕದ ತಂತ್ರಜ್ಞಾನವನ್ನು ಉನ್ನತೀಕರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಒಪ್ಪಂದ ಬಾಕಿ ಇದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ₹30 ಕೋಟಿ ಅನುದಾನ ಬಳಸಿ ಘಟಕವನ್ನು ಉನ್ನತೀಕರಿಸಲಾಗುವುದು’ ಎಂದು ನಗರ ಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. </p><p>‘ಎನ್ಜಿಟಿ ಅನುದಾನವಾಗಿರುವುದರಿಂದ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ಮೂಲಕ ಕಾಮಗಾರಿ ನಡೆಸಬೇಕಾಗಿದೆ. ಈ ಮೂಲಕ ಹೈಟೆಕ್ ತಂತ್ರಜ್ಞಾನವನ್ನು ಬಳಸಲಾಗುವುದು’ ಎಂದರು. </p><p>‘ಬಯೋ ಕಲ್ಚರ್ ವಿಧಾನದ ಮೂಲಕವೂ ಕೊಳಚೆ ನೀರು ಶುದ್ಧೀಕರಣಕ್ಕೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಚೆನ್ನೈನ ಕಂಪನಿಯೊಂದು ನೀರಿನ ಮಾದರಿಯನ್ನು ಸಂಗ್ರಹಿಸಿ ಕೊಂಡೊಯ್ದಿದೆ. ಈ ವಿಧಾನದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ನೀರು ಶುದ್ಧೀಕರಿಸಲಾಗುತ್ತದೆ. ಕಂಪನಿಯವರು ಒಪ್ಪಿಕೊಂಡರೆ ಆ ವಿಧಾನವನ್ನೂ ಬಳಸಲಾಗುವುದು. ಘಟಕದಲ್ಲಿ ಕೊಳಚೆ ನೀರು ಸಮರ್ಪಕವಾಗಿ ಶುದ್ಧೀಕರಣಗೊಂಡರೆ ಆ ನೀರನ್ನು ಉದ್ಯಾನಗಳಿಗೆ ಬಳಸಬಹುದಾಗಿದೆ. ನದಿಗೂ ಹರಿಸಬಹುದು’ ಎಂದು ಅವರು ಹೇಳಿದರು.</p>.<p><strong>‘ಉತ್ತಮ ಯಂತ್ರಗಳ ಬಳಕೆಯಾಗಲಿ’</strong></p><p><strong>‘</strong>ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದ ಯಂತ್ರಗಳು ಕೆಟ್ಟು ಹೋಗುತ್ತಿರುವುದರಿಂದ ಅದು ಸರಿಯಾಗಿ ಕಾರ್ಯಾಚರಿಸದೆ ದುರ್ವಾಸನೆ ಬೀರುತ್ತಿದೆ. ಯಂತ್ರಗಳು ಕಳಪೆಯಾಗಿರುವ ಸಾಧ್ಯತೆಯೂ ಇದೆ. ಈ ಘಟಕಕ್ಕೆ ಗುಣಮಟ್ಟದ ಯಂತ್ರಗಳನ್ನು ಬಳಸಿ ಕೊಳಚೆ ನೀರು ಶುದ್ಧೀಕರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹೇಳಿದರು.</p><p>‘ಹಲವು ವರ್ಷಗಳಿಂದ ಈ ಘಟಕದ ಸುತ್ತಮುತ್ತ ದುರ್ವಾಸನೆ ಹೊರ ಸೂಸುವ ಸಮಸ್ಯೆ ಇದೆ. ಅಲ್ಲಿನ ಜನರ ಗೋಳು ಹೇಳ ತೀರದಾಗಿದೆ. ರೋಗಭೀತಿಯೂ ಅವರನ್ನು ಕಾಡುತ್ತಿದೆ. ಸಂಬಂಧಪಟ್ವರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>