<p><strong>ಉಡುಪಿ:</strong> ದೇಶದ ಆರ್ಥಿಕತೆ ನಗದು ರಹಿತ ಡಿಜಿಟಲ್ ವ್ಯವಸ್ಥೆಗೆ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಂಚಕರ ಜಾಲಕ್ಕೆ ಬಿದ್ದು ಹಲವರು ಹಣ ಕಳೆದುಕೊಂಡಿವ ಪ್ರಕರಣ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿದೆ.</p>.<p><strong>ಎಟಿಎಂ ಕಾರ್ಡ್ ಬಳಸುವಾಗ ಇರಲಿ ಎಚ್ಚರ:</strong></p>.<p>ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪಗಳು ಬದಲಾಗಿದ್ದು, ವಂಚಕರು ಎಟಿಎಂ ಕೇಂದ್ರಗಳನ್ನು ಬಳಸಿಕೊಂಡು ಗ್ರಾಹಕರ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.</p>.<p><strong>ಸ್ಕಿಮ್ಮರ್ ವಂಚನೆ:</strong></p>.<p>ಎಟಿಎಂ ಕಾರ್ಡ್ನಲ್ಲಿರುವ ಸಂಪೂರ್ಣ ವಿವರಗಳನ್ನು ನಕಲು ಮಾಡುವ ಸ್ಕಿಮ್ಮರ್ ಸಾಧನಗಳನ್ನು ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳಲ್ಲಿ ಅಳವಡಿಸುತ್ತಿರುವುದು ಕಂಡುಬಂದಿದೆ. ಕುಂದಾಪುರದಲ್ಲಿ ಈಚೆಗೆ ಬ್ಯಾಂಕ್ವೊಂದರ ಎಟಿಎಂನಲ್ಲಿ ಸ್ಕಿಮ್ಮರ್ ಯಂತ್ರ ಪತ್ತೆಯಾಗಿದ್ದು, ಹರೀಶ್ ಖಾರ್ವಿ ಅವರ ಖಾತೆಯಿಂದ ₹80,000 ಹಣ ದೋಚಲಾಗಿದೆ. ಇದೇ ಎಟಿಎಂನಿಂದ ನಾಲ್ಕೈದು ಜನ ಹಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಸೆನ್ ಠಾಣೆಯ ಇನ್ಸ್ಪೆಕ್ಟರ್ ಪಿ.ಸೀತಾರಾಮ್.</p>.<p><strong>ವಂಚನೆ ಹೇಗೆ ?</strong></p>.<p>ಹಣ ಬಿಡಿಸಲು ಎಟಿಎಂಗೆ ಬರುವ ಗ್ರಾಹಕರು ಕಾರ್ಡ್ ಹಾಕಿದಾಕ್ಷಣ ಅದರ ಸಂಪೂರ್ಣ ಮಾಹಿತಿ ಸ್ಕಿಮ್ಮರ್ ಯಂತ್ರದಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ವಂಚಕರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ರಹಸ್ಯ ಸಂಖ್ಯೆಯ ಮಾಹಿತಿ ಲಭ್ಯವಾಗುತ್ತದೆ.</p>.<p>ಇದೆಲ್ಲವನ್ನೂ ಬಳಸಿಕೊಂಡು ನಕಲಿ ಎಟಿಎಂ ಕಾರ್ಡ್ಗಳನ್ನು ತಯಾರಿಸಿ, ಬೇರೆ ಜಿಲ್ಲೆ ಅಥವಾ ರಾಜ್ಯಗಳಲ್ಲಿರುವ ಎಟಿಎಂಗಳಿಂದ ಹಣ ಬಿಡಿಸಿಕೊಳ್ಳಲಾಗುತ್ತದೆ ಎನ್ನುತ್ತಾರೆ ಅವರು.</p>.<p><strong>ಕಾಲ್ಸೆಂಟರ್ ವಂಚನೆ:</strong></p>.<p>ಈಚೆಗೆ ನಕಲಿ ಕಾಲ್ಸೆಂಟರ್ಗಳ ಮೂಲಕ ಆನ್ಲೈನ್ ಶಾಪಿಂಗ್ ಮಾಡುವ ಗ್ರಾಹಕರನ್ನು ಗುರಿಯಾಗಿಸಿ ವಂಚನೆ ಎಸಗಲಾಗುತ್ತಿದೆ. ಈಚೆಗೆ ದಿನೇಶ್ ಎಂಬುವರು ಆನ್ಲೈನ್ನಲ್ಲಿ ಬ್ಲೂಟೂತ್ ಸ್ಪೀಕರ್ ಖರೀದಿಸಿ, ಉತ್ಪನ್ನ ಇಷ್ಟವಾಗದೆ ಹಣ ಪಾಪಸ್ ಪಡೆಯಲು ಗೂಗಲ್ನಲ್ಲಿ ಸಿಕ್ಕ ಕಾಲ್ ಸೆಂಟರ್ ನಂಬರ್ ಕರೆ ಮಾಡಿದ್ದರು.</p>.<p>ಕರೆ ಸ್ವೀಕರಿಸಿದವರು ದಿನೇಶ್ ಮೊಬೈಲ್ಗೆ ಲಿಂಕ್ ಕಳಿಸಿ, ಎಟಿಎಂ ಕಾರ್ಡ್ನ ವಿವರ ಪಡೆದುಕೊಂಡಿದ್ದರು. ಬಳಿಕ ಒಟಿಪಿ ವರ್ಗಾಯಿಸಿಕೊಂಡು ₹ 87,998 ಲಪಟಾಯಿಸಿದ್ದರು ಎಂದು ಇನ್ಸ್ಪೆಕ್ಟರ್ ವಂಚನೆಯ ವಿವರ ನೀಡಿದರು.</p>.<p><strong>ಬಂಪರ್ ಬಹುಮಾನದ ಆಮಿಷ:</strong></p>.<p>ಈಚೆಗೆ ಬ್ರಹ್ಮಾವರದ ಪಲ್ಲವಿ ಎಂಬುವರಿಗೆ ಖ್ಯಾತ ಕಂಪೆನಿಯ ಹೆಸರಿನಲ್ಲಿ ಪಾರ್ಸಲ್ ಕಳಿಸಲಾಗಿತ್ತು. ಅದರಲ್ಲಿದ್ದ ಕೂಪನ್ನಲ್ಲಿ ₹ 12 ಲಕ್ಷದ ಬಹುಮಾನ ಗೆದ್ದಿರುವುದಾಗಿ ಬರೆಯಲಾಗಿತ್ತು. ಅದನ್ನು ನಂಬಿ ಕೂಪನ್ನಲ್ಲಿದ್ದ ಕಾಲ್ಸೆಂಟರ್ಗೆ ಕರೆ ಮಾಡಿದಾಗ,ವಂಚಕರು ಜಿಎಸ್ಟಿ, ಎನ್ಒಸಿ, ಸೆಂಟ್ರಲ್ ಟ್ಯಾಕ್ಸ್ ಹೆಸರಿನಲ್ಲಿ ₹ 3.55 ಲಕ್ಷ ಹಣವನ್ನು ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಜಾಲದ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ದೇಶದ ಆರ್ಥಿಕತೆ ನಗದು ರಹಿತ ಡಿಜಿಟಲ್ ವ್ಯವಸ್ಥೆಗೆ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಂಚಕರ ಜಾಲಕ್ಕೆ ಬಿದ್ದು ಹಲವರು ಹಣ ಕಳೆದುಕೊಂಡಿವ ಪ್ರಕರಣ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿದೆ.</p>.<p><strong>ಎಟಿಎಂ ಕಾರ್ಡ್ ಬಳಸುವಾಗ ಇರಲಿ ಎಚ್ಚರ:</strong></p>.<p>ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪಗಳು ಬದಲಾಗಿದ್ದು, ವಂಚಕರು ಎಟಿಎಂ ಕೇಂದ್ರಗಳನ್ನು ಬಳಸಿಕೊಂಡು ಗ್ರಾಹಕರ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.</p>.<p><strong>ಸ್ಕಿಮ್ಮರ್ ವಂಚನೆ:</strong></p>.<p>ಎಟಿಎಂ ಕಾರ್ಡ್ನಲ್ಲಿರುವ ಸಂಪೂರ್ಣ ವಿವರಗಳನ್ನು ನಕಲು ಮಾಡುವ ಸ್ಕಿಮ್ಮರ್ ಸಾಧನಗಳನ್ನು ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳಲ್ಲಿ ಅಳವಡಿಸುತ್ತಿರುವುದು ಕಂಡುಬಂದಿದೆ. ಕುಂದಾಪುರದಲ್ಲಿ ಈಚೆಗೆ ಬ್ಯಾಂಕ್ವೊಂದರ ಎಟಿಎಂನಲ್ಲಿ ಸ್ಕಿಮ್ಮರ್ ಯಂತ್ರ ಪತ್ತೆಯಾಗಿದ್ದು, ಹರೀಶ್ ಖಾರ್ವಿ ಅವರ ಖಾತೆಯಿಂದ ₹80,000 ಹಣ ದೋಚಲಾಗಿದೆ. ಇದೇ ಎಟಿಎಂನಿಂದ ನಾಲ್ಕೈದು ಜನ ಹಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಸೆನ್ ಠಾಣೆಯ ಇನ್ಸ್ಪೆಕ್ಟರ್ ಪಿ.ಸೀತಾರಾಮ್.</p>.<p><strong>ವಂಚನೆ ಹೇಗೆ ?</strong></p>.<p>ಹಣ ಬಿಡಿಸಲು ಎಟಿಎಂಗೆ ಬರುವ ಗ್ರಾಹಕರು ಕಾರ್ಡ್ ಹಾಕಿದಾಕ್ಷಣ ಅದರ ಸಂಪೂರ್ಣ ಮಾಹಿತಿ ಸ್ಕಿಮ್ಮರ್ ಯಂತ್ರದಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ವಂಚಕರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ರಹಸ್ಯ ಸಂಖ್ಯೆಯ ಮಾಹಿತಿ ಲಭ್ಯವಾಗುತ್ತದೆ.</p>.<p>ಇದೆಲ್ಲವನ್ನೂ ಬಳಸಿಕೊಂಡು ನಕಲಿ ಎಟಿಎಂ ಕಾರ್ಡ್ಗಳನ್ನು ತಯಾರಿಸಿ, ಬೇರೆ ಜಿಲ್ಲೆ ಅಥವಾ ರಾಜ್ಯಗಳಲ್ಲಿರುವ ಎಟಿಎಂಗಳಿಂದ ಹಣ ಬಿಡಿಸಿಕೊಳ್ಳಲಾಗುತ್ತದೆ ಎನ್ನುತ್ತಾರೆ ಅವರು.</p>.<p><strong>ಕಾಲ್ಸೆಂಟರ್ ವಂಚನೆ:</strong></p>.<p>ಈಚೆಗೆ ನಕಲಿ ಕಾಲ್ಸೆಂಟರ್ಗಳ ಮೂಲಕ ಆನ್ಲೈನ್ ಶಾಪಿಂಗ್ ಮಾಡುವ ಗ್ರಾಹಕರನ್ನು ಗುರಿಯಾಗಿಸಿ ವಂಚನೆ ಎಸಗಲಾಗುತ್ತಿದೆ. ಈಚೆಗೆ ದಿನೇಶ್ ಎಂಬುವರು ಆನ್ಲೈನ್ನಲ್ಲಿ ಬ್ಲೂಟೂತ್ ಸ್ಪೀಕರ್ ಖರೀದಿಸಿ, ಉತ್ಪನ್ನ ಇಷ್ಟವಾಗದೆ ಹಣ ಪಾಪಸ್ ಪಡೆಯಲು ಗೂಗಲ್ನಲ್ಲಿ ಸಿಕ್ಕ ಕಾಲ್ ಸೆಂಟರ್ ನಂಬರ್ ಕರೆ ಮಾಡಿದ್ದರು.</p>.<p>ಕರೆ ಸ್ವೀಕರಿಸಿದವರು ದಿನೇಶ್ ಮೊಬೈಲ್ಗೆ ಲಿಂಕ್ ಕಳಿಸಿ, ಎಟಿಎಂ ಕಾರ್ಡ್ನ ವಿವರ ಪಡೆದುಕೊಂಡಿದ್ದರು. ಬಳಿಕ ಒಟಿಪಿ ವರ್ಗಾಯಿಸಿಕೊಂಡು ₹ 87,998 ಲಪಟಾಯಿಸಿದ್ದರು ಎಂದು ಇನ್ಸ್ಪೆಕ್ಟರ್ ವಂಚನೆಯ ವಿವರ ನೀಡಿದರು.</p>.<p><strong>ಬಂಪರ್ ಬಹುಮಾನದ ಆಮಿಷ:</strong></p>.<p>ಈಚೆಗೆ ಬ್ರಹ್ಮಾವರದ ಪಲ್ಲವಿ ಎಂಬುವರಿಗೆ ಖ್ಯಾತ ಕಂಪೆನಿಯ ಹೆಸರಿನಲ್ಲಿ ಪಾರ್ಸಲ್ ಕಳಿಸಲಾಗಿತ್ತು. ಅದರಲ್ಲಿದ್ದ ಕೂಪನ್ನಲ್ಲಿ ₹ 12 ಲಕ್ಷದ ಬಹುಮಾನ ಗೆದ್ದಿರುವುದಾಗಿ ಬರೆಯಲಾಗಿತ್ತು. ಅದನ್ನು ನಂಬಿ ಕೂಪನ್ನಲ್ಲಿದ್ದ ಕಾಲ್ಸೆಂಟರ್ಗೆ ಕರೆ ಮಾಡಿದಾಗ,ವಂಚಕರು ಜಿಎಸ್ಟಿ, ಎನ್ಒಸಿ, ಸೆಂಟ್ರಲ್ ಟ್ಯಾಕ್ಸ್ ಹೆಸರಿನಲ್ಲಿ ₹ 3.55 ಲಕ್ಷ ಹಣವನ್ನು ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಜಾಲದ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>