<p><strong>ಪಡುಬಿದ್ರಿ:</strong> ಕೆವೈಸಿ ಸಮಸ್ಯೆಯಿಂದ ಪಡಿತರ ಪಡೆಯಲು ಅಡಚಣೆಯಾಗಿದ್ದ 94 ವರ್ಷದ ವೃದ್ಧೆಗೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆಯಲು ತಹಶೀಲ್ದಾರ್ ಪ್ರತಿಭಾ ಆರ್. ನೆರವಾಗಿದ್ದಾರೆ.</p>.<p>ಪಲಿಮಾರು ವ್ಯಾಪ್ತಿಯ ಅಡ್ವೆ ನಿವಾಸಿ ಮುತ್ತು ಪೂಜಾರ್ತಿ ಅವರಿಗೆ ಕೆವೈಸಿ ಆಗದೆ ಪಡಿತರ ಅಕ್ಕಿ ಕೊಡಲು ಅಡಚಣೆಯಾಗಿತ್ತು. ಕೆವೈಸಿ ಮಾಡಿಸಲು ಗ್ರಾಮ ಒನ್ ಕೇಂದ್ರಕ್ಕೆ ಹೋಗಿದ್ದರು. ಆದರೆ ಅಲ್ಲಿಯೂ ಸಾಧ್ಯವಾಗಿರಲಿಲ್ಲ. ಮನೆಯವರು ಈ ಬಗ್ಗೆ ಗ್ರಾಮ ಒನ್ ಸೆಂಟರ್ನ ಮಾಲಿಕ ಇಸ್ಮಾಯಿಲ್ ಪಲಿಮಾರು ಅವರಿಗೆ ತಿಳಿಸಿದರು. ಅವರು ಅದನ್ನು ತಹಶೀಲ್ದಾರರ ಗಮನಕ್ಕೆ ತಂದರು.</p>.<p>ತಹಶೀಲ್ದಾರರು ಆಹಾರ ನಿರೀಕ್ಷಕ ಲೀಲಾನಂದ್ರನ್ನು ಕರೆಯಿಸಿ, ವೃದ್ಧೆಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಲು ಆದೇಶಿಸಿದರು. ಅದರಂತೆ ಪೂಜಾರ್ತಿ ಅಮ್ಮನಿಗೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆದುಕೊಳ್ಳಲು ಸಾಪ್ಟ್ವೇರ್ನಲ್ಲಿ ಅವಕಾಶ ಕಲ್ಪಿಸಲಾಯಿತು.</p>.<p><strong>ನೇರ ಗಮನಕ್ಕೆ ತನ್ನಿ:</strong> ಹಾಸಿಗೆ ಹಿಡಿದ ರೋಗಿಗಳಿಗೆ, ವೃದ್ಧರಿಗೆ ಪಡಿತರ ಅಂಗಡಿಗೆ ಬರುವುದು ಅಸಾಧ್ಯವಾಗಿರುತ್ತದೆ. ಅಂಥವರಿಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಿ ಪಡಿತರ ಪಡೆಯುವ ವ್ಯವಸ್ಥೆ ಮಾಡಲು ಸಾಧ್ಯವಿದೆ. ಅಂತಹವರು ನೇರವಾಗಿ ಗಮನಕ್ಕೆ ತಂದರೆ ಅಂತವರಿಗೆ ಸಹಾಯ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಉಚ್ಚಿಲದಲ್ಲಿ ಐರಿಸ್ ಸ್ಕ್ಯಾನರ್ ವ್ಯವಸ್ಥೆ:</strong> ಬಡಾ ಉಚ್ಚಿಲ ಬಡಾ ಪಂಚಾಯಿತಿಯ ಕೆಳಭಾಗ, ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯ ಪಕ್ಕದಲ್ಲಿರುವ ಜನ ಸೇವಾ ಕೇಂದ್ರ ಗ್ರಾಮ ಒನ್ ಕೇಂದ್ರದಲ್ಲಿ ಕಣ್ಣಿನ ಐರಿಸ್ ಸ್ಕ್ಯಾನರ್ ಅಳವಡಿಸಲಾಗಿದೆ. ಫೆ. 28ರಂದು ಈ ಬಗ್ಗೆ ಬಂದು ಸೌಲಭ್ಯ ಪಡೆಯಬಹುದು ಎಂದು ತಹಶೀಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ:</strong> ಕೆವೈಸಿ ಸಮಸ್ಯೆಯಿಂದ ಪಡಿತರ ಪಡೆಯಲು ಅಡಚಣೆಯಾಗಿದ್ದ 94 ವರ್ಷದ ವೃದ್ಧೆಗೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆಯಲು ತಹಶೀಲ್ದಾರ್ ಪ್ರತಿಭಾ ಆರ್. ನೆರವಾಗಿದ್ದಾರೆ.</p>.<p>ಪಲಿಮಾರು ವ್ಯಾಪ್ತಿಯ ಅಡ್ವೆ ನಿವಾಸಿ ಮುತ್ತು ಪೂಜಾರ್ತಿ ಅವರಿಗೆ ಕೆವೈಸಿ ಆಗದೆ ಪಡಿತರ ಅಕ್ಕಿ ಕೊಡಲು ಅಡಚಣೆಯಾಗಿತ್ತು. ಕೆವೈಸಿ ಮಾಡಿಸಲು ಗ್ರಾಮ ಒನ್ ಕೇಂದ್ರಕ್ಕೆ ಹೋಗಿದ್ದರು. ಆದರೆ ಅಲ್ಲಿಯೂ ಸಾಧ್ಯವಾಗಿರಲಿಲ್ಲ. ಮನೆಯವರು ಈ ಬಗ್ಗೆ ಗ್ರಾಮ ಒನ್ ಸೆಂಟರ್ನ ಮಾಲಿಕ ಇಸ್ಮಾಯಿಲ್ ಪಲಿಮಾರು ಅವರಿಗೆ ತಿಳಿಸಿದರು. ಅವರು ಅದನ್ನು ತಹಶೀಲ್ದಾರರ ಗಮನಕ್ಕೆ ತಂದರು.</p>.<p>ತಹಶೀಲ್ದಾರರು ಆಹಾರ ನಿರೀಕ್ಷಕ ಲೀಲಾನಂದ್ರನ್ನು ಕರೆಯಿಸಿ, ವೃದ್ಧೆಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಲು ಆದೇಶಿಸಿದರು. ಅದರಂತೆ ಪೂಜಾರ್ತಿ ಅಮ್ಮನಿಗೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆದುಕೊಳ್ಳಲು ಸಾಪ್ಟ್ವೇರ್ನಲ್ಲಿ ಅವಕಾಶ ಕಲ್ಪಿಸಲಾಯಿತು.</p>.<p><strong>ನೇರ ಗಮನಕ್ಕೆ ತನ್ನಿ:</strong> ಹಾಸಿಗೆ ಹಿಡಿದ ರೋಗಿಗಳಿಗೆ, ವೃದ್ಧರಿಗೆ ಪಡಿತರ ಅಂಗಡಿಗೆ ಬರುವುದು ಅಸಾಧ್ಯವಾಗಿರುತ್ತದೆ. ಅಂಥವರಿಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಿ ಪಡಿತರ ಪಡೆಯುವ ವ್ಯವಸ್ಥೆ ಮಾಡಲು ಸಾಧ್ಯವಿದೆ. ಅಂತಹವರು ನೇರವಾಗಿ ಗಮನಕ್ಕೆ ತಂದರೆ ಅಂತವರಿಗೆ ಸಹಾಯ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಉಚ್ಚಿಲದಲ್ಲಿ ಐರಿಸ್ ಸ್ಕ್ಯಾನರ್ ವ್ಯವಸ್ಥೆ:</strong> ಬಡಾ ಉಚ್ಚಿಲ ಬಡಾ ಪಂಚಾಯಿತಿಯ ಕೆಳಭಾಗ, ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯ ಪಕ್ಕದಲ್ಲಿರುವ ಜನ ಸೇವಾ ಕೇಂದ್ರ ಗ್ರಾಮ ಒನ್ ಕೇಂದ್ರದಲ್ಲಿ ಕಣ್ಣಿನ ಐರಿಸ್ ಸ್ಕ್ಯಾನರ್ ಅಳವಡಿಸಲಾಗಿದೆ. ಫೆ. 28ರಂದು ಈ ಬಗ್ಗೆ ಬಂದು ಸೌಲಭ್ಯ ಪಡೆಯಬಹುದು ಎಂದು ತಹಶೀಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>