<p><strong>ಪಡುಬಿದ್ರಿ:</strong> ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಪುನರ್ ನಿರ್ಮಾಣ ಪ್ರಕ್ರಿಯೆಗಳಲ್ಲಿ ಶ್ರೀದೇವಸ್ಥಾನದ ಮಾತೃ ಮಂಡಳಿಯು ತೀರ್ಥ ಮಂಟಪದ ನಂದಿಗೆ ಬೆಳ್ಳಿ ಕವಚದ ನಿರ್ಮಾಣಕ್ಕಾಗಿ ಸಂಕಲ್ಪಿಸಿದೆ.</p>.<p>ಭಕ್ತರು ಕಿರು ಕಾಣಿಕೆಯ ಅರ್ಪಣೆಯೊಂದಿಗೆ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಸಾಮೂಹಿಕ, ಸಾಮುದಾಯಿಕ ದೇಣಿಗೆಯನ್ನು ನಿರೀಕ್ಷಿಸುತ್ತಿರುವುದಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.</p>.<p>ಮಂಡಳಿಯ ಪ್ರಾರಂಭದ ಸಭೆಯಲ್ಲಿ ನಂದಿಯ ಮುಖಭಾಗಕ್ಕೆ ಬೆಳ್ಳಿ ಮಡಾಯಿಸಲು ಸಂಕಲ್ಪಿಸಿ, ತಮ್ಮ ಕಾರ್ಯ ಮುಂದುವರಿಸಿರುವ ಮಾತೆಯರು ಸೇರಿದ ಸಭೆಯಲ್ಲಿ 2ಕೆ.ಜಿಯಷ್ಟು ಬೆಳ್ಳಿ ಹಾಗೂ ₹1.67 ಲಕ್ಷ ಹಣ ಸಂಗ್ರಹಿಸಿದ್ದಾರೆ. ಬೆಳ್ಳಿ ಕವಚಕ್ಕೆ 3 ಕೆ.ಜಿಗಳಷ್ಟು ಬೆಳ್ಳಿ, ನಂದಿಗೆ ಪೂರ್ಣ ಬೆಳ್ಳಿ ಕವಚವನ್ನು ಹೊಂದಿಸಲು ಸಮಾರು 18 ಕೆ.ಜಿಯಷ್ಟು ಬೆಳ್ಳಿ ಅಂದಾಜಿಸಿದೆ.</p>.<p>ದೇಗುಲದ ಸಂಕಲ್ಪಿತ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ಅಗತ್ಯ ಎಂದು ದೇಗುಲದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಹಾಗೂ ಕೊರ್ನಾಯ ಮನೆ ಶ್ರೀಪತಿ ಕೊರ್ನಾಯ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ:</strong> ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಪುನರ್ ನಿರ್ಮಾಣ ಪ್ರಕ್ರಿಯೆಗಳಲ್ಲಿ ಶ್ರೀದೇವಸ್ಥಾನದ ಮಾತೃ ಮಂಡಳಿಯು ತೀರ್ಥ ಮಂಟಪದ ನಂದಿಗೆ ಬೆಳ್ಳಿ ಕವಚದ ನಿರ್ಮಾಣಕ್ಕಾಗಿ ಸಂಕಲ್ಪಿಸಿದೆ.</p>.<p>ಭಕ್ತರು ಕಿರು ಕಾಣಿಕೆಯ ಅರ್ಪಣೆಯೊಂದಿಗೆ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಸಾಮೂಹಿಕ, ಸಾಮುದಾಯಿಕ ದೇಣಿಗೆಯನ್ನು ನಿರೀಕ್ಷಿಸುತ್ತಿರುವುದಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.</p>.<p>ಮಂಡಳಿಯ ಪ್ರಾರಂಭದ ಸಭೆಯಲ್ಲಿ ನಂದಿಯ ಮುಖಭಾಗಕ್ಕೆ ಬೆಳ್ಳಿ ಮಡಾಯಿಸಲು ಸಂಕಲ್ಪಿಸಿ, ತಮ್ಮ ಕಾರ್ಯ ಮುಂದುವರಿಸಿರುವ ಮಾತೆಯರು ಸೇರಿದ ಸಭೆಯಲ್ಲಿ 2ಕೆ.ಜಿಯಷ್ಟು ಬೆಳ್ಳಿ ಹಾಗೂ ₹1.67 ಲಕ್ಷ ಹಣ ಸಂಗ್ರಹಿಸಿದ್ದಾರೆ. ಬೆಳ್ಳಿ ಕವಚಕ್ಕೆ 3 ಕೆ.ಜಿಗಳಷ್ಟು ಬೆಳ್ಳಿ, ನಂದಿಗೆ ಪೂರ್ಣ ಬೆಳ್ಳಿ ಕವಚವನ್ನು ಹೊಂದಿಸಲು ಸಮಾರು 18 ಕೆ.ಜಿಯಷ್ಟು ಬೆಳ್ಳಿ ಅಂದಾಜಿಸಿದೆ.</p>.<p>ದೇಗುಲದ ಸಂಕಲ್ಪಿತ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ಅಗತ್ಯ ಎಂದು ದೇಗುಲದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಹಾಗೂ ಕೊರ್ನಾಯ ಮನೆ ಶ್ರೀಪತಿ ಕೊರ್ನಾಯ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>