ಶನಿವಾರ ಅಯೋಧ್ಯೆಯ ಸರ್ಕ್ಯೂಟ್ ಹೌಸ್ನಲ್ಲಿ ಟ್ರಸ್ಟ್ನ ಅನೌಪಚಾರಿಕ ಸಭೆ ನಡೆದಿದ್ದು, ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದ್ದು, ಕಾಮಗಾರಿಯನ್ನು ಎಲ್ ಅಂಡ್ ಟಿ ಸಂಸ್ಥೆ ನಡೆಸಲಿದೆ ಎಂಬ ವಿಚಾರ ಚರ್ಚೆಯಾಯಿತು. ಸಭೆಯಲ್ಲಿ ಚರ್ಚೆಯಾದ ವಿಚಾರಗಳನ್ನು ಟ್ರಸ್ಟ್ನ ಸದಸ್ಯರು ಪೇಜಾವರ ಶ್ರೀಗಳಿಗೆ ನೀಡಿದ್ದು, ಭಾನುವಾರದ ಔಪಚಾರಿಕ ಸಭೆಗೆ ಆಹ್ವಾನ ನೀಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.