ಜಾತಿ, ಧರ್ಮಗಳಿಗೆ ಅನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜತೆಗೆ, ಕೋವಿಡ್ನಿಂದ ಸುರಕ್ಷಿತವಾಗಿರುವುದು ಹೇಗೆ, ಕೋವಿಡ್ ಜತೆಗೆ ಬದುಕುವುದು ಹೇಗೆ ಎಂಬ ಕುರಿತು ಜನ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಲ್ಲಿ ರಕ್ತದ ಕೊರತೆ ಎದುರಾದಾಗ ತಂಡದ ಸದಸ್ಯರು ನಿಯಮಿತವಾಗಿ ವಾರಕ್ಕೊಮ್ಮೆ ರಕ್ತದಾನ ಮಾಡಿದ್ದಾರೆ ಎಂದರು ಮೊಗವೀರ ಯುವ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವರಾಂ.