20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ನಿತ್ಯಾನಂದ ಒಳಕಾಡು ‘ಅನಾಥ ಶವಗಳ ಮುಕ್ತಿದಾತ’ ಎಂದೇ ಉಡುಪಿಯಲ್ಲಿ ಚಿರಪರಿಚಿತ. ಜೀವನದಲ್ಲಿ ಜಿಗುಪ್ಸೆ, ಖಿನ್ನತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡವರಿಗೆ ಗೌರವಯುತ ಅಂತ್ಯಸಂಸ್ಕಾರದ ಮೂಲಕ ಮುಕ್ತಿ ನೀಡಿದ್ದಾರೆ. ಈ ಕಾರ್ಯಕ್ಕೆ ಪ್ರತಿಯಾಗಿ ಅವರು ಚಿಕ್ಕಾಸು ಕೂಡ ಪಡೆಯುವುದಿಲ್ಲ. ನಗರದ ಕೆಲವರು ಉದ್ಯಮಿಗಳು, ಸಂಘ ಸಂಸ್ಥೆಗಳು ಒಳಕಾಡು ಅವರ ಬೆನ್ನಿಗೆ ನಿಂತಿದ್ದು, ಆರ್ಥಿಕ ನೆರವು ನೀಡಿ ಸಮಾಜಪರ ಕಾರ್ಯವನ್ನು ಪೋಷಿಸುತ್ತಿವೆ.