ಕುಂದಾಪುರ ಆಸ್ಪತ್ರೆ ಡಿಸಿಎಚ್ (ಕೋವಿಡ್ ಆಸ್ಪತ್ರೆ) ಆಸ್ಪತ್ರೆಯಾಗಿ ಬದಲಾದ ಬಳಿಕವೂ ಅರುಣ್ ನಾಯ್ಕ್ ವಾರ್ಡ್, ಐಸಿಯು, ಕೌಂಟರ್ ಹೀಗೆ ಎಲ್ಲ ವಿಭಾಗಗಳಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ಕೋವಿಡ್ ಕರ್ತವ್ಯ ಮಾಡಿದ್ದು ನನ್ನ ಪಾಲಿಗೆ ಸಿಕ್ಕ ಬಹುದೊಡ್ಡ ಅವಾರ್ಡ್. ಸಾರ್ವಜನಿಕನಾಗಿ ಹಾಗೂ ಶುಶ್ರೂಷಕನಾಗಿ ನನ್ನ ಕೆಲಸದ ಬಗ್ಗೆ ಗೌರವ, ತೃಪ್ತಿ ಹಾಗೂ ಹೆಮ್ಮೆ ಇದೆ ಎನ್ನುತ್ತಾರೆ ಅರುಣ್.