<p><strong>ಹೆಬ್ರಿ:</strong> ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಈಚೆಗೆ ಹುಂಡಿ ಹಾಗೂ ಕಲ್ಕುಡ, ಕಲ್ಲುರ್ಟಿ ದೈವಗಳ ಕಾಣಿಕೆ ಡಬ್ಬಿಯ ಹಣ ಕದ್ದ ಆರೋಪಿ ಸಲ್ಮಾನ್ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.</p>.<p>ಸಲ್ಮಾನ್ ದೇವಸ್ಥಾನದಿಂದ 15 ದಿನದಲ್ಲಿ 2 ಸಲ ಕಳವು ಮಾಡಿದ್ದ. ದೇವಸ್ಥಾನದ ಪ್ರಧಾನ ಅರ್ಚಕ, ಧರ್ಮಾಧಿಕಾರಿ ಸುಕುಮಾರ ಮೋಹನ್ ಮೇ 30ರಂದು ನಡೆದ ಕಲ್ಲುರ್ಟಿ ದರ್ಶನ, ಕೊರಗಜ್ಜನ ಹರಕೆಯ ಕೋಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಕೊರಗಜ್ಜ ದೈವ ‘9 ದಿನಗಳ ಒಳಗೆ ಕಳವು ಮಾಡಿದವನ ಹೆಡೆಮುರಿ ಕಟ್ಟುವೆ’ ಎಂದು ಅಭಯ ನೀಡಿತ್ತು. </p>.<p>ದೈವ ನುಡಿದಂತೆ ಕಳವು ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿ ಗ್ರಾಮಸ್ಥರ ಸಹಕಾರದಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ‘ದೇವಿ ಮತ್ತು ದೈವಗಳ ಮೇಲಿದ್ದ ನಂಬಿಕೆ ಮತ್ತಷ್ಟು ಇಮ್ಮಡಿಗೊಂಡಿದೆ’ ಎಂದು ಸುಕುಮಾರ ಮೋಹನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಬ್ರಿ:</strong> ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಈಚೆಗೆ ಹುಂಡಿ ಹಾಗೂ ಕಲ್ಕುಡ, ಕಲ್ಲುರ್ಟಿ ದೈವಗಳ ಕಾಣಿಕೆ ಡಬ್ಬಿಯ ಹಣ ಕದ್ದ ಆರೋಪಿ ಸಲ್ಮಾನ್ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.</p>.<p>ಸಲ್ಮಾನ್ ದೇವಸ್ಥಾನದಿಂದ 15 ದಿನದಲ್ಲಿ 2 ಸಲ ಕಳವು ಮಾಡಿದ್ದ. ದೇವಸ್ಥಾನದ ಪ್ರಧಾನ ಅರ್ಚಕ, ಧರ್ಮಾಧಿಕಾರಿ ಸುಕುಮಾರ ಮೋಹನ್ ಮೇ 30ರಂದು ನಡೆದ ಕಲ್ಲುರ್ಟಿ ದರ್ಶನ, ಕೊರಗಜ್ಜನ ಹರಕೆಯ ಕೋಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಕೊರಗಜ್ಜ ದೈವ ‘9 ದಿನಗಳ ಒಳಗೆ ಕಳವು ಮಾಡಿದವನ ಹೆಡೆಮುರಿ ಕಟ್ಟುವೆ’ ಎಂದು ಅಭಯ ನೀಡಿತ್ತು. </p>.<p>ದೈವ ನುಡಿದಂತೆ ಕಳವು ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿ ಗ್ರಾಮಸ್ಥರ ಸಹಕಾರದಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ‘ದೇವಿ ಮತ್ತು ದೈವಗಳ ಮೇಲಿದ್ದ ನಂಬಿಕೆ ಮತ್ತಷ್ಟು ಇಮ್ಮಡಿಗೊಂಡಿದೆ’ ಎಂದು ಸುಕುಮಾರ ಮೋಹನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>