ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಕಡಲ್ಕೊರೆತ: ಬೇಕಿದೆ ಶಾಶ್ವತ ಪರಿಹಾರ

Published : 1 ಜುಲೈ 2024, 7:14 IST
Last Updated : 1 ಜುಲೈ 2024, 7:14 IST
ಫಾಲೋ ಮಾಡಿ
Comments
ಕಾಪು ವ್ಯಾಪ್ತಿಯ ಉದ್ಯಾವರ ಪಡುಕರೆ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸಿರುವುದು
ಕಾಪು ವ್ಯಾಪ್ತಿಯ ಉದ್ಯಾವರ ಪಡುಕರೆ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸಿರುವುದು
ಪುಣೆಯ ಸೆಂಟ್ರಲ್‌ ವಾಟರ್‌ ಆ್ಯಂಡ್‌ ಪವರ್‌ ರಿಸರ್ಚ್‌ ಸ್ಟೇಷನ್‌ನವರು ನೀಡುವ ವಿನ್ಯಾಸಕ್ಕೆ ಅನುಗುಣವಾಗಿ ನಾವು ಕಡಲ್ಕೊರೆತ ತಡೆ ಕಾಮಗಾರಿ ನಡೆಸುತ್ತೇವೆ. ಮೂರು ವರ್ಷಗಳಿಂದ ಕಡಲ್ಕೊರೆತ ತಡೆ ಕಾಮಗಾರಿಗೆ ಯಾವುದೇ ಅನುದಾನ ಬಂದಿಲ್ಲ. ಆದ್ದರಿಂದ ಕಾಮಗಾರಿ ನಡೆದಿಲ್ಲ. ಶಾಶ್ವತ ಪರಿಹಾರ ಯೋಜನೆಯ ಅಡಿಯಲ್ಲೇ ನಾವು ಕಾಮಗಾರಿ ನಡೆಸುತ್ತಿದ್ದೇವೆ. ಕಡಲ್ಕೊರೆತದ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈಚೆಗೆ ಸಭೆ ನಡೆದಿದೆ. ಅದರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ₹5 ಕೋಟಿ ಬಿಡುಗಡೆ ಮಾಡಲು ಅದರಲ್ಲಿ ನಿರ್ಧಾರವಾಗಿದೆ ಶೋಭಾ ಕೆ. ಎ.ಇ.ಇ ಬಂದರು ಮತ್ತು ಮೀನುಗಾರಿಕಾ ಇಲಾಖೆ ........... ಕಡಲ್ಕೊರೆತದಿಂದ ಈ ಭಾಗದ ಮೀನುಗಾರರಿಗೆ ಬಹಳಷ್ಟು ಸಮಸ್ಯೆ ಆಗುತ್ತದೆ. ಅದರ ತಡೆಗೆ ಈಗ ನಡೆಯುತ್ತಿರುವ ಕಾಮಗಾರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ತ್ರಿಕೋನ ಆಕೃತಿಯ ಕಾಂಕ್ರೀಟ್ ಕಲ್ಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಕುವುದರಿಂದ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಬೇಕು. ಕೇವಲ ಕಡಲ್ಕೊರೆತ ಉಂಟಾದ ಸಂದರ್ಭಗಳಲ್ಲಿ ಶಾಶ್ವತ ಪರಿಹಾರ ಭರವಸೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೆ ಮೊದಲೇ ಅನುದಾನ ಕ್ರೋಢೀಕರಿಸಿ ಸಮಸ್ಯೆ ಪರಿಹರಿಸುವ ಮೂಲಕ ಸಮುದ್ರ ತೀರದ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು ಕಿರಣ್ ರಾಜ್ ಕರ್ಕೇರ ಮೀನುಗಾರ ನಡಿಪಟ್ಣ ........... ಉದ್ಯಾವರ ಪಡುಕರೆ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸುವ ಮೂಲಕ ಮಳೆಗಾಲದ ರಕ್ಕಸ ಗಾತ್ರದ ಅಲೆಗಳು ಉಂಟುಮಾಡುತ್ತಿದ್ದ ಆತಂಕಕ್ಕೆ ಮುಕ್ತಿ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಮಳೆಗಾಲ ಬಂದರೆ ಕಡಲ ಅಬ್ಬರ ಹೆಚ್ಚಾಗಿ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ –ಸರೋಜಿನಿ ಮೈಂದನ್ ಉದ್ಯಾವರ ಪಡುಕರೆ ನಿವಾಸಿ  .............. ಮಳೆಗಾಲದಲ್ಲಿ ಸಮುದ್ರದ ಅಲೆಗಳು ‌ರಸ್ತೆವರೆಗೆ ಬರುತ್ತದೆ. ಪ್ರಸ್ತುತ ಕಡಲ ನೀರು ನದಿಯನ್ನು ಸೇರುತ್ತಿಲ್ಲ. ಪೈಲಟ್ ಯೋಜನೆಯಿಂದಾಗಿ ಕಡಲತಡಿಯ ನಿವಾಸಿಗಳಿಗೆ ಕೊಂಚ ಸಮಾಧಾನವಾಗಿದೆ. ಈ ಭಾಗದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಮಾತ್ರವಲ್ಲದೆ ನದಿ ಕೊರೆತದಿಂದ ತೀರ ನಿವಾಸಿಗಳಿಗೆ ರಕ್ಷಣೆ ಬೇಕಿದೆ
–ಯೋಗೀಶ್ ಬಿ. ಕೋಟ್ಯಾನ್ ಉದ್ಯಾವರ ಪಡುಕರೆ
ಪ್ರತಿ ಮಳೆಗಾಲ ಇಲ್ಲಿ ಕಡಲ್ಕೊರೆತ ಉಂಟಾಗುತ್ತದೆ. ತೀರದ ನಿವಾಸಿಗಳು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಅಲೆಗಳ ಅಬ್ಬರ ಜೋರಾಗಿದ್ದು ಕಡಲ್ಕೊರೆತ ಬಿರುಸಾಗಿದೆ. ಮೀನುಗಾರರ ಶೆಡ್‌ಗಳು ಕಡಲು ಪಾಲಾಗುವ ಅಪಾಯದಲ್ಲಿದೆ. ಕಡಲ್ಕೊರೆತ ಹೆಚ್ಚಾದಷ್ಟು ಇಲ್ಲಿನ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ
–ದಿನೇಶ ಖಾರ್ವಿ ಉಪ್ಪುಂದ
‘ಮುಂಜಾಗ್ರತೆ ಅಗತ್ಯ’
ಕಡಲ್ಕೊರೆತದಿಂದ ಭೂಮಿ ಮನೆ ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಸರ್ಕಾರ ಜನರಿಗೆ ಪರಿಹಾರವನ್ನೂ ಕೊಡಬೇಕಾಗುತ್ತದೆ. ಅದಕ್ಕಿಂತ ಮುಂಜಾಗ್ರತೆ ವಹಿಸಿ ಕಡಲ್ಕೊರೆತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಅದರ ತಡೆಗೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕು. ಕಡಲ್ಕೊರೆತಕ್ಕೆ ಟೆಟ್ರಾಪಾಡ್‌ಗಳನ್ನು ಹಾಕುವುದು ಹೆಚ್ಚು ಪರಿಣಾಮಕಾರಿ ಕ್ರಮ. ತೆರೆಗಳು ಬಡಿದು ಹಿಂದಕ್ಕೆ ಹೋಗುವಾಗ ಟೆಟ್ರಾಪಾಡ್‌ಗಳನ್ನು ಎಳೆದುಕೊಂಡು ಹೋಗುವುದಿಲ್ಲ. ಆದರೆ ಅದನ್ನು ಹಾಕುವುದು ದುಬಾರಿ. ಕೇಂದ್ರ ರಾಜ್ಯ ಸರ್ಕಾರ ಜಂಟಿಯಾಗಿ ಇಂತಹ ಯೋಜನೆಗಳನ್ನು ರೂಪಿಸಬಹುದು. ಮರವಂತೆಯ ಕೆಲವು ಕಡೆ ಇದನ್ನು ಹಾಕಿದ್ದಾರೆ. ಇದೊಂದು ಶಾಶ್ವತ ಕಾಮಗಾರಿ ಎನ್ನಬಹುದು. ಮುಂಬೈನ ಹಲವು ಬೀಚ್‌ಗಳಲ್ಲಿ ಟೆಟ್ರಾಪಾಡ್‌ಗಳನ್ನು ಹಾಕಲಾಗಿದೆ. ಪುಣೆಯಲ್ಲಿರುವ ಸೆಂಟ್ರಲ್‌ ವಾಟರ್‌ ಆ್ಯಂಡ್‌ ಪವರ್‌ ರಿಸರ್ಚ್‌ ಸ್ಟೇಷನ್‌ನಲ್ಲಿ ಕಡಲ್ಕೊರೆತ ಪರಿಹಾರ ಮಾರ್ಗಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ ಮತ್ತು ಅವರು ಸರ್ಕಾರಕ್ಕೆ ಸಲಹೆ ನೀಡುತ್ತಾರೆ. ನಾನು ಸಚಿವನಾಗಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ತಿಳಿಸಿದರು.
ತುರ್ತು ಕಾಮಗಾರಿಗೆ ಹಣ ಬಿಡುಗಡೆ
ಮುಖ್ಯವಾಗಿ ಜುಲೈ ತಿಂಗಳಲ್ಲಿ ಭಾರಿ ಮಳೆ ಬಂದಾಗ ಕಡಲ್ಕೊರೆತವೂ ಜಾಸ್ತಿಯಾಗುತ್ತದೆ. ಈ ಬಾರಿ ಪಡುಬಿದ್ರಿಯಲ್ಲಿ ಸ್ವಲ್ಪಮಟ್ಟಿಗೆ ಕಡಲ್ಕೊರೆತ ಆಗಿದೆ ಬೇರೆಲ್ಲೂ ಆದ ಬಗ್ಗೆ ವರದಿಯಾಗಿಲ್ಲ. ಕಡಲ್ಕೊರೆತ ತೀವ್ರವಾದರೆ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಲಾಗುವುದು. ಕಡಲ್ಕೊರೆತದ ಕುರಿತು ಸಂಶೋಧನೆ ಮಾಡಿರುವ ತಂಡವೊಂದು ಅಧ್ಯಯನ ವರದಿ ನೀಡಿದೆ. ಆದರೆ ಅದರಲ್ಲಿ ಹೇಳಿರುವ ಯೋಜನೆಯನ್ನುಅನುಷ್ಠಾನಗೊಳಿಸಿದರೆ ಅದು ಇಲ್ಲಿ ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ನಿರ್ಧಾರವಾಗಿದೆ. ಇನ್ನೂ ಆದೇಶ ಬಂದಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕಾದರೆ ಬೇರೆ ಕಡೆ ಯಾವ ರೀತಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲೂ ವಿಚಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT