‘ಯಾರೊಂದಿಗೂ ಮಾತನಾಡಲು ಬಯಸದ ಸಂತೋಷ್ ರಾವ್ ಮಂದಿರದಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು, ದೇಗುಲದ ವಠಾರ ಶುಚಿಗೊಳಿಸುವುದಲ್ಲಿ ತಲ್ಲೀನರಾಗಿರುತ್ತಾರೆ. ಬಿಡುವಿನ ವೇಳೆಯಲ್ಲಿ ಜಪ ಮಾಡುತ್ತಾರೆ. ಈ ಸೇವಾ ಕಾರ್ಯಗಳಿಗೆ ಪ್ರತಿಯಾಗಿ ಹಣ ಪಡೆಯುತ್ತಿಲ್ಲ’ ಎಂದು ಮಂದಿರದ ಗುರುಸ್ವಾಮಿ ಮಾಹಿತಿ ನೀಡಿದರು.