ಭಾರತದಿಂದ ಪ್ರತಿ ವರ್ಷ 2.5 ಲಕ್ಷ ಜನರು ವಿದೇಶಗಳಿಗೆ ಹೋಗುತ್ತಿದ್ದು, ಮಂಗಳೂರಿನಿಂದಲೇ ಸುಮಾರು 12 ಸಾವಿರ ಜನರು ತೆರಳುತ್ತಾರೆ. ಆದರೆ, ಇಲ್ಲಿ ಏಜೆಂಟರ ಮೂಲಕ ವಿದೇಶಕ್ಕೆ ಹೋಗುತ್ತಿರುವುದರಿಂದ ಅವರ ಔದ್ಯೋಗಿಕ ಮಾಹಿತಿ ಪಡೆಯುವುದು ಕಷ್ಟಸಾಧ್ಯ. ಮುಂಬೈ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕಪ್ಪುಪಟ್ಟಿಗೆ ಸೇರಿದ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರಿನ ಏಜೆಂಟರ ಮೂಲಕ ಉದ್ಯೋಗದ ಆಮಿಷವೊಡ್ಡಿ ನಿರುದ್ಯೋಗಿಗಳನ್ನು ಶ್ರೀಮಂತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿ. ಶಿರ್ವದ ಜೆಸಿಂತಾ ಪ್ರಕರಣ ಕೂಡ ಇದೇ ರೀತಿಯಾಗಿತ್ತು. ಕಳ್ಳಹಾದಿಯಲ್ಲಿ ತೆರಳಿದ ಹಿನ್ನೆಲೆ ಸರ್ಕಾರ ಸಹ ಆಕೆಯ ಸಹಾಯಕ್ಕೆ ಬರಲಿಲ್ಲ. ಬಳಿಕ ಅವಳನ್ನು ಖರೀದಿಸಿದ ವ್ಯಕ್ತಿಗೆ ಐದು ಲಕ್ಷವನ್ನು ಕೊಟ್ಟು ಬಿಡಿಸಿಕೊಂಡು ಬರಬೇಕಾಯಿತು ಎಂದು ಹೇಳಿದರು.