<p>ಪಡುಬಿದ್ರಿ: ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾದ ಗುತ್ತಿಗೆ ಕಾರ್ಮಿಕರುವೇತನ ಪಾವತಿ ವಿಳಂಬವನ್ನು ಖಂಡಿಸಿ ಗುರುವಾರ ದಿಢೀರ್ ಮುಷ್ಕರ ನಡೆಸಿದ್ದು, ವಾಹನ ಮಾಲೀಕರು ಟೋಲ್ ಮುಕ್ತವಾಗಿ ಸಂಚಾರ ಆನಂದಿಸಿದರೆ, ನವಯುಗ್ ಕಂಪೆನಿಯು ₹3.5 ಲಕ್ಷ ನಷ್ಟ ಅಂದಾಜಿಸಿದೆ.</p>.<p>ಇಲ್ಲಿನ ಕಾರ್ಮಿಕರು ಟಿಬಿಆರ್ ಗುತ್ತಿಗೆ ಕಂಪನಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ತಿಂಗಳ 10ನೇ ತಾರೀಕಿಗೆ ವೇತನ ಪಾವತಿಯಾಗುತ್ತಿತ್ತು. ಈ ಬಾರಿ 18 ದಿನ ಕಳೆದರೂ ವೇತನ ಪಾವತಿಸಿಲ್ಲ. ಕಾರ್ಮಿಕರ ಬೇಡಿಕೆ ಹಿನ್ನೆಲೆಯಲ್ಲಿ 17ರೊಳಗೆ ವೇತನ ಪಾವತಿಸುವ ಭರವಸೆಯನ್ನು ಗುತ್ತಿಗೆ ಕಂಪನಿ ನೀಡಿತ್ತು. ಆದರೆ, ವೇತನ ಪಾವತಿಯಾಗದ ಕಾರಣ ಬೆಳಿಗ್ಗೆ 8 ಗಂಟೆಯಿಂದ ಸುಮಾರು 97 ಕಾರ್ಮಿಕರು ಮುಷ್ಕರ ನಡೆಸಿದರು.</p>.<p>ಟಿಬಿಆರ್ ಕಂಪನಿಯು ಕಾರ್ಮಿಕರಿಗೆ 7 ತಿಂಗಳಿಂದ ಭವಿಷ್ಯ ನಿಧಿ ಹಣ ನೀಡದೆ ಸತಾಯಿಸುತ್ತಿದೆ ಎಂದೂ ಕಾರ್ಮಿಕರು ಆರೋಪಿಸಿದ್ದಾರೆ. ನವಯುಗ್ ಕಂಪನಿಯು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿದೆ. ಮುಷ್ಕರದ ಆರಂಭಗೊಂಡ ಬಳಿಕ, ಟಿಬಿಆರ್ ಕಂಪನಿಯು ವೇತನ ನೀಡಲು ಆರಂಭಿಸಿದೆ. ಆದರೆ, ಸಂಜೆ ವರೆಗೆ ಎಲ್ಲ ಕಾರ್ಮಿಕರಿಗೆ ವೇತನ ಪಾವತಿಸಲು ವಿಫಲವಾಗಿದೆ. ಇದರಿಂದ ಸಂಜೆವರೆಗೂ ಮುಷ್ಕರ ಮುಂದುವರಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಡುಬಿದ್ರಿ: ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾದ ಗುತ್ತಿಗೆ ಕಾರ್ಮಿಕರುವೇತನ ಪಾವತಿ ವಿಳಂಬವನ್ನು ಖಂಡಿಸಿ ಗುರುವಾರ ದಿಢೀರ್ ಮುಷ್ಕರ ನಡೆಸಿದ್ದು, ವಾಹನ ಮಾಲೀಕರು ಟೋಲ್ ಮುಕ್ತವಾಗಿ ಸಂಚಾರ ಆನಂದಿಸಿದರೆ, ನವಯುಗ್ ಕಂಪೆನಿಯು ₹3.5 ಲಕ್ಷ ನಷ್ಟ ಅಂದಾಜಿಸಿದೆ.</p>.<p>ಇಲ್ಲಿನ ಕಾರ್ಮಿಕರು ಟಿಬಿಆರ್ ಗುತ್ತಿಗೆ ಕಂಪನಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ತಿಂಗಳ 10ನೇ ತಾರೀಕಿಗೆ ವೇತನ ಪಾವತಿಯಾಗುತ್ತಿತ್ತು. ಈ ಬಾರಿ 18 ದಿನ ಕಳೆದರೂ ವೇತನ ಪಾವತಿಸಿಲ್ಲ. ಕಾರ್ಮಿಕರ ಬೇಡಿಕೆ ಹಿನ್ನೆಲೆಯಲ್ಲಿ 17ರೊಳಗೆ ವೇತನ ಪಾವತಿಸುವ ಭರವಸೆಯನ್ನು ಗುತ್ತಿಗೆ ಕಂಪನಿ ನೀಡಿತ್ತು. ಆದರೆ, ವೇತನ ಪಾವತಿಯಾಗದ ಕಾರಣ ಬೆಳಿಗ್ಗೆ 8 ಗಂಟೆಯಿಂದ ಸುಮಾರು 97 ಕಾರ್ಮಿಕರು ಮುಷ್ಕರ ನಡೆಸಿದರು.</p>.<p>ಟಿಬಿಆರ್ ಕಂಪನಿಯು ಕಾರ್ಮಿಕರಿಗೆ 7 ತಿಂಗಳಿಂದ ಭವಿಷ್ಯ ನಿಧಿ ಹಣ ನೀಡದೆ ಸತಾಯಿಸುತ್ತಿದೆ ಎಂದೂ ಕಾರ್ಮಿಕರು ಆರೋಪಿಸಿದ್ದಾರೆ. ನವಯುಗ್ ಕಂಪನಿಯು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿದೆ. ಮುಷ್ಕರದ ಆರಂಭಗೊಂಡ ಬಳಿಕ, ಟಿಬಿಆರ್ ಕಂಪನಿಯು ವೇತನ ನೀಡಲು ಆರಂಭಿಸಿದೆ. ಆದರೆ, ಸಂಜೆ ವರೆಗೆ ಎಲ್ಲ ಕಾರ್ಮಿಕರಿಗೆ ವೇತನ ಪಾವತಿಸಲು ವಿಫಲವಾಗಿದೆ. ಇದರಿಂದ ಸಂಜೆವರೆಗೂ ಮುಷ್ಕರ ಮುಂದುವರಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>