<p><strong>ಉಡುಪಿ</strong>: ಎರಡೂವರೆ ವರ್ಷದ ಕಂದಮ್ಮನ ಚಿಕಿತ್ಸಾ ವೆಚ್ಚ ಭರಿಸಲು ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ಗುರುವಾರ ಆರಾಧ್ಯ ಪೋಷಕರಿಗೆ ಹಸ್ತಾಂತರಿಸಲಾಯಿತು.</p>.<p>ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರುವಿನಲ್ಲಿರುವ ಮಗುವಿನ ನಿವಾಸಕ್ಕೆ ತೆರಳಿದ ಮಂಗಳೂರಿನ ನವಸಹಜ ಸಂಘಟನೆ ಹಾಗೂ ಉಡುಪಿ ಆಶ್ರಯ ಸಮುದಾಯ ಸಂಘಟನೆ ಸದಸ್ಯರು ₹ 70,000ದ ಚೆಕ್ ಅನ್ನು ಪೋಷಕರಿಗೆ ನೀಡಿದರು.</p>.<p>ಮಗುವಿನ ಪೋಷಕರು ಸಮುದಾಯದ ಸಮಾಜಮುಖಿ ಕಾರ್ಯಕ್ಕೆ ಸಂತಸಪಟ್ಟರು. ಇದೇವೇಳೆ ಮಗು ಶೀಘ್ರ ಗುಣಮುಖವಾಗಲಿದೆ ಎಂದು ಹಾರೈಸಿ ಬಂದೆವು ಎಂದು ಆಶ್ರಯ ಸಂಘಟನೆಯ ಸಮೀಕ್ಷಾ ತಿಳಿಸಿದರು.</p>.<p>ಆಶ್ರಯ ಸಂಸ್ಥೆ ಹಲವು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಶ್ರಮಿಸುತ್ತಿದೆ. ಈಚೆಗೆ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಮೀಕ್ಷಾ ನೇತೃತ್ವದ ತಂಡ ಉಡುಪಿ, ಮಣಿಪಾಲ್ ಹಾಗೂ ಕಾರ್ಕಳದಲ್ಲಿ ಸಾರ್ವಜನಿಕರಿಂದ ₹ 21,000 ದೇಣಿಗೆ ಸಂಗ್ರಹಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಎರಡೂವರೆ ವರ್ಷದ ಕಂದಮ್ಮನ ಚಿಕಿತ್ಸಾ ವೆಚ್ಚ ಭರಿಸಲು ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ಗುರುವಾರ ಆರಾಧ್ಯ ಪೋಷಕರಿಗೆ ಹಸ್ತಾಂತರಿಸಲಾಯಿತು.</p>.<p>ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರುವಿನಲ್ಲಿರುವ ಮಗುವಿನ ನಿವಾಸಕ್ಕೆ ತೆರಳಿದ ಮಂಗಳೂರಿನ ನವಸಹಜ ಸಂಘಟನೆ ಹಾಗೂ ಉಡುಪಿ ಆಶ್ರಯ ಸಮುದಾಯ ಸಂಘಟನೆ ಸದಸ್ಯರು ₹ 70,000ದ ಚೆಕ್ ಅನ್ನು ಪೋಷಕರಿಗೆ ನೀಡಿದರು.</p>.<p>ಮಗುವಿನ ಪೋಷಕರು ಸಮುದಾಯದ ಸಮಾಜಮುಖಿ ಕಾರ್ಯಕ್ಕೆ ಸಂತಸಪಟ್ಟರು. ಇದೇವೇಳೆ ಮಗು ಶೀಘ್ರ ಗುಣಮುಖವಾಗಲಿದೆ ಎಂದು ಹಾರೈಸಿ ಬಂದೆವು ಎಂದು ಆಶ್ರಯ ಸಂಘಟನೆಯ ಸಮೀಕ್ಷಾ ತಿಳಿಸಿದರು.</p>.<p>ಆಶ್ರಯ ಸಂಸ್ಥೆ ಹಲವು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಶ್ರಮಿಸುತ್ತಿದೆ. ಈಚೆಗೆ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಮೀಕ್ಷಾ ನೇತೃತ್ವದ ತಂಡ ಉಡುಪಿ, ಮಣಿಪಾಲ್ ಹಾಗೂ ಕಾರ್ಕಳದಲ್ಲಿ ಸಾರ್ವಜನಿಕರಿಂದ ₹ 21,000 ದೇಣಿಗೆ ಸಂಗ್ರಹಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>