ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಚಿಕಿತ್ಸೆಗೆ ಸಂಗ್ರಹಿಸಿದ್ದ ಹಣ ಹಸ್ತಾಂತರ

ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದ ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು
Last Updated 19 ನವೆಂಬರ್ 2020, 13:13 IST
ಅಕ್ಷರ ಗಾತ್ರ

ಉಡುಪಿ: ಎರಡೂವರೆ ವರ್ಷದ ಕಂದಮ್ಮನ ಚಿಕಿತ್ಸಾ ವೆಚ್ಚ ಭರಿಸಲು ಉಡುಪಿಯ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ಗುರುವಾರ ಆರಾಧ್ಯ ಪೋಷಕರಿಗೆ ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರುವಿನಲ್ಲಿರುವ ಮಗುವಿನ ನಿವಾಸಕ್ಕೆ ತೆರಳಿದ ಮಂಗಳೂರಿನ ನವಸಹಜ ಸಂಘಟನೆ ಹಾಗೂ ಉಡುಪಿ ಆಶ್ರಯ ಸಮುದಾಯ ಸಂಘಟನೆ ಸದಸ್ಯರು ₹ 70,000ದ ಚೆಕ್‌ ಅನ್ನು ಪೋಷಕರಿಗೆ ನೀಡಿದರು.

ಮಗುವಿನ ಪೋಷಕರು ಸಮುದಾಯದ ಸಮಾಜಮುಖಿ ಕಾರ್ಯಕ್ಕೆ ಸಂತಸಪಟ್ಟರು. ಇದೇವೇಳೆ ಮಗು ಶೀಘ್ರ ಗುಣಮುಖವಾಗಲಿದೆ ಎಂದು ಹಾರೈಸಿ ಬಂದೆವು ಎಂದು ಆಶ್ರಯ ಸಂಘಟನೆಯ ಸಮೀಕ್ಷಾ ತಿಳಿಸಿದರು.

ಆಶ್ರಯ ಸಂಸ್ಥೆ ಹಲವು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಶ್ರಮಿಸುತ್ತಿದೆ. ಈಚೆಗೆ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಮೀಕ್ಷಾ ನೇತೃತ್ವದ ತಂಡ ಉಡುಪಿ, ಮಣಿಪಾಲ್‌ ಹಾಗೂ ಕಾರ್ಕಳದಲ್ಲಿ ಸಾರ್ವಜನಿಕರಿಂದ ₹ 21,000 ದೇಣಿಗೆ ಸಂಗ್ರಹಿಸಿತ್ತು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT