<p><strong>ಉಡುಪಿ</strong>: ಮಳೆಗಾಲ ಆರಂಭವಾಗಿ ಟ್ರಾಲಿಂಗ್ ನಿಷೇಧ ಜಾರಿಗೆ ಬರುತ್ತಿದ್ದಂತೆ ಮಲ್ಪೆಯ ಮಂಜುಗಡ್ಡೆ ಘಟಕಗಳು (ಐಸ್ ಪ್ಲಾಂಟ್) ಸ್ತಬ್ಧಗೊಂಡಿವೆ.</p>.<p>ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಬೇಡಿಕೆ ಇಲ್ಲದ ಕಾರಣ ಪ್ರತಿವರ್ಷ ಮಂಜುಗಡ್ಡೆ ಘಟಕಗಳು ಕಾರ್ಯಾಚರಣೆ ನಿಲ್ಲಿಸುತ್ತವೆ. ಈ ಘಟಕಗಳಲ್ಲಿ ದುಡಿಯುವ ಉತ್ತರ ಭಾರತದ ಹೆಚ್ಚಿನ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಾರೆ. ಇನ್ನು ಕೆಲವು ಕಾರ್ಮಿಕರು ಪರ್ಯಾಯ ವೃತ್ತಿಯ ಮೊರೆ ಹೊಗುತ್ತಾರೆ. </p>.<p>ಕಳೆದ ಮೀನುಗಾರಿಕಾ ಋತುವಿನಲ್ಲಿ ತೀವ್ರ ಮತ್ಸ್ಯಕ್ಷಾಮ ತಲೆದೋರಿದ ಕಾರಣ ದೋಣಿ ಮಾಲೀಕರಿಗೆ ನಷ್ಟ ಉಂಟಾಗಿತ್ತು. ಈ ಕಾರಣಕ್ಕೆ ಮಂಜುಗಡ್ಡೆ ಖರೀದಿಸಿದ ಹಣವನ್ನು ಕೆಲವು ದೋಣಿಯವರು ಇನ್ನೂ ನೀಡಿಲ್ಲ ಎನ್ನುತ್ತಾರೆ ಮಂಜುಗಡ್ಡೆ ಘಟಕಗಳ ಮಾಲೀಕರು.</p>.<p>ಮಂಜುಗಡ್ಡೆ ಘಟಕಗಳಲ್ಲಿ ಕೆಲಸ ಮಾಡಲು ಸ್ಥಳೀಯರು ಬರುವುದಿಲ್ಲ. ಈ ಕಾರಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನೇ ಹೆಚ್ಚಾಗಿ ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ. ಘಟಕಗಳು ಸ್ತಬ್ಧವಾಗುವ ಸಂದರ್ಭದಲ್ಲಿ ಅವರಲ್ಲಿ ಕೆಲವರು ಊರಿಗೆ ಹೋದರೆ ಮರಳಿ ಬರುವುದೇ ಇಲ್ಲ. ಈ ಕಾರಣಕ್ಕೆ ಕೆಲಸ ಇಲ್ಲದಿದ್ದರೂ ಮಳೆಗಾಲದಲ್ಲೂ ಸಂಬಳ ಕೊಟ್ಟು ಕೆಲವು ಕಾರ್ಮಿಕರನ್ನು ಕೆಲಸಕ್ಕಿರಿಸಿಕೊಳ್ಳುವ ಅನಿವಾರ್ಯತೆ ಇದೆ ಎನ್ನುತ್ತಾರೆ ಅವರು.</p>.<p>ಮೀನುಗಾರಿಕಾ ಋತುವಿನಲ್ಲಿ ಮಂಜುಗಡ್ಡೆ ಕರಗದಂತೆ ಕಾಪಾಡಲು ಘಟಕಗಳನ್ನು ನಿರಂತರ ಚಾಲನೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬರುತ್ತದೆ ಎಂದೂ ಅವರು ಅಳಲು ತೋಡಿಕೊಳ್ಳುತ್ತಾರೆ.</p>.<p>ಜಿಲ್ಲೆಯಲ್ಲಿ ಅಂದಾಜು 90ರಷ್ಟು ಮಂಜುಗಡ್ಡೆ ಘಟಕಗಳಿದ್ದು, ಅದರಲ್ಲಿ 70ರಷ್ಟು ಮಲ್ಪೆಯಲ್ಲಿವೆ. ಕೆಲ ವರ್ಷಗಳ ಹಿಂದೆ ಮಲ್ಪೆಯಲ್ಲಿ ನೂರಕ್ಕೂ ಹೆಚ್ಚು ಐಸ್ ಪ್ಲಾಂಟ್ಗಳಿದ್ದವು. ನಿರ್ವಹಣೆ ಸಾಧ್ಯವಾಗದೆ ಬಹುತೇಕ ಪ್ಲಾಂಟ್ಗಳು ಬಾಗಿಲು ಮುಚ್ಚಿವೆ ಎಂದು ಮಲ್ಪೆಯ ಮಂಜುಗಡ್ಡೆ ಘಟಕವೊಂದರ ಮಾಲೀಕರೊಬ್ಬರು ತಿಳಿಸಿದರು.</p>.<p>ಮಂಜುಗಡ್ಡೆ ಉತ್ಪಾದನಾ ವೆಚ್ಚವೇ ಅಧಿಕವಾಗಿ ಲಾಭ ಕನಿಷ್ಠವಾಗಿದೆ. ಹಲವಾರು ವರ್ಷಗಳಿಂದ ಇದೇ ಉದ್ಯಮ ನಡೆಸುತ್ತಿರುವುದರಿಂದ ಇದರಲ್ಲೇ ಮುಂದುವರಿದಿದ್ದೇವೆ. ಮುಂಬರುವ ಮೀನುಗಾರಿಕಾ ಋತುವಿನಲ್ಲೂ ಮತ್ಸ್ಯಕ್ಷಾಮ ತಲೆದೋರಿದರೆ ನಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಹೇಳಿದರು.</p>.<p>ಕಾರ್ಮಿಕರ ಕೂಲಿ, ಅಮೋನಿಯಾ ಸಿಲಿಂಡರ್ಗಳ ವೆಚ್ಚ ಕೂಡ ನಮಗೆ ಹೊರೆಯಾಗಿ ಪರಿಣಮಿಸಿದೆ. ಮೀನುಗಾರಿಕೆ ಉತ್ತಮವಾಗಿ ನಡೆದರೆ ಮಾತ್ರ ನಮಗೂ ಲಾಭವಾಗುತ್ತದೆ ಎಂದೂ ಅವರು ತಿಳಿಸಿದರು.</p>.<p>ಮೀನುಗಾರಿಕಾ ಋತುವಿನಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಯಾಂತ್ರೀಕೃತ ದೋಣಿಗಳು ಸಮುದ್ರದಲ್ಲಿ ಹಿಡಿದ ಮೀನುಗಳು ಕೆಡದಂತೆ ಇರಿಸಿಕೊಳ್ಳಲು ಟನ್ಗಟ್ಟಲೆ ಮಂಜುಗಡ್ಡೆಯನ್ನು ಹೇರಿಕೊಂಡು ಹೋಗುತ್ತವೆ. ಇದರಿಂದ ಮಂಜುಗಡ್ಡೆ ಉದ್ಯಮಕ್ಕೂ ಲಾಭವಾಗುತ್ತದೆ. </p>.<p> ಮತ್ಸ್ಯಕ್ಷಾಮ ತಲೆದೋರಿದರೆ ಮಂಜುಗಡ್ಡೆಗೂ ಬೇಡಿಕೆ ಕುಸಿತ ವಿದ್ಯುತ್ ಬಿಲ್ ಪಾವತಿಗೆ ಪರದಾಟ ಲಾಭವಿಲ್ಲದೆ ಬಾಗಿಲು ಮುಚ್ಚುತ್ತಿರುವ ಘಟಕಗಳು</p>.<div><blockquote>ಪ್ರತಿವರ್ಷ ಮಳೆಗಾಲದಲ್ಲಿ ಊರಿಗೆ ಹೋಗುತ್ತಿದ್ದೆ. ಈ ವರ್ಷ ಹೋಗಿಲ್ಲ. ಮಂಜುಗಡ್ಡೆ ಉತ್ಪಾದನೆ ನಡೆಯದಿದ್ದರೂ ಘಟಕದಲ್ಲಿ ಸಣ್ಣಪುಟ್ಟ ಕೆಲಸಗಳಿರುತ್ತವೆ </blockquote><span class="attribution">ಸಮರೇಶ್ ಮಂಜುಗಡ್ಡೆ ಘಟಕದ ಕಾರ್ಮಿಕ</span></div>.<p> ‘ಸಹಾಯಧನ ಹೆಚ್ಚಿಸಬೇಕು’ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮಂಜುಗಡ್ಡೆ ಘಟಕಗಳು ಕಾರ್ಯಾಚರಿಸುವುದಿಲ್ಲ. ಈ ವೇಳೆ ಘಟಕಗಳ ನಿರ್ವಹಣಾ ಕೆಲಸಗಳನ್ನು ನಡೆಸುತ್ತೇವೆ ಎನ್ನುತ್ತಾರೆ ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ರಾಜ್ಯ ಘಟಕ ಕಾರ್ಯದರ್ಶಿ ಉದಯ ಕುಮಾರ್. ವಿದ್ಯುತ್ ಬಿಲ್ ಪಾವತಿಯೇ ನಮಗೆ ದುಬಾರಿಯಾಗಿ ಕಾಡುತ್ತಿದೆ. ವಿದ್ಯುತ್ ಬಿಲ್ಗೆ ಸರ್ಕಾರದಿಂದ ವರ್ಷಕ್ಕೆ ₹ 2 ಲಕ್ಷ ಸಹಾಯ ಧನ ಸಿಗುತ್ತದೆ. ಆದರೆ ಅದು ಯಾವುದಕ್ಕೂ ಸಾಲದು. ಒಂದೊಂದು ಘಟಕಗಳು ಪ್ರತಿ ತಿಂಗಳು ₹ 5 ಲಕ್ಷದಷ್ಟು ವಿದ್ಯುತ್ ಬಿಲ್ ಪಾವತಿಸುತ್ತವೆ. ಸರ್ಕಾರ ಸಹಾಯಧನ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಮಳೆಗಾಲ ಆರಂಭವಾಗಿ ಟ್ರಾಲಿಂಗ್ ನಿಷೇಧ ಜಾರಿಗೆ ಬರುತ್ತಿದ್ದಂತೆ ಮಲ್ಪೆಯ ಮಂಜುಗಡ್ಡೆ ಘಟಕಗಳು (ಐಸ್ ಪ್ಲಾಂಟ್) ಸ್ತಬ್ಧಗೊಂಡಿವೆ.</p>.<p>ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಬೇಡಿಕೆ ಇಲ್ಲದ ಕಾರಣ ಪ್ರತಿವರ್ಷ ಮಂಜುಗಡ್ಡೆ ಘಟಕಗಳು ಕಾರ್ಯಾಚರಣೆ ನಿಲ್ಲಿಸುತ್ತವೆ. ಈ ಘಟಕಗಳಲ್ಲಿ ದುಡಿಯುವ ಉತ್ತರ ಭಾರತದ ಹೆಚ್ಚಿನ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಾರೆ. ಇನ್ನು ಕೆಲವು ಕಾರ್ಮಿಕರು ಪರ್ಯಾಯ ವೃತ್ತಿಯ ಮೊರೆ ಹೊಗುತ್ತಾರೆ. </p>.<p>ಕಳೆದ ಮೀನುಗಾರಿಕಾ ಋತುವಿನಲ್ಲಿ ತೀವ್ರ ಮತ್ಸ್ಯಕ್ಷಾಮ ತಲೆದೋರಿದ ಕಾರಣ ದೋಣಿ ಮಾಲೀಕರಿಗೆ ನಷ್ಟ ಉಂಟಾಗಿತ್ತು. ಈ ಕಾರಣಕ್ಕೆ ಮಂಜುಗಡ್ಡೆ ಖರೀದಿಸಿದ ಹಣವನ್ನು ಕೆಲವು ದೋಣಿಯವರು ಇನ್ನೂ ನೀಡಿಲ್ಲ ಎನ್ನುತ್ತಾರೆ ಮಂಜುಗಡ್ಡೆ ಘಟಕಗಳ ಮಾಲೀಕರು.</p>.<p>ಮಂಜುಗಡ್ಡೆ ಘಟಕಗಳಲ್ಲಿ ಕೆಲಸ ಮಾಡಲು ಸ್ಥಳೀಯರು ಬರುವುದಿಲ್ಲ. ಈ ಕಾರಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನೇ ಹೆಚ್ಚಾಗಿ ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ. ಘಟಕಗಳು ಸ್ತಬ್ಧವಾಗುವ ಸಂದರ್ಭದಲ್ಲಿ ಅವರಲ್ಲಿ ಕೆಲವರು ಊರಿಗೆ ಹೋದರೆ ಮರಳಿ ಬರುವುದೇ ಇಲ್ಲ. ಈ ಕಾರಣಕ್ಕೆ ಕೆಲಸ ಇಲ್ಲದಿದ್ದರೂ ಮಳೆಗಾಲದಲ್ಲೂ ಸಂಬಳ ಕೊಟ್ಟು ಕೆಲವು ಕಾರ್ಮಿಕರನ್ನು ಕೆಲಸಕ್ಕಿರಿಸಿಕೊಳ್ಳುವ ಅನಿವಾರ್ಯತೆ ಇದೆ ಎನ್ನುತ್ತಾರೆ ಅವರು.</p>.<p>ಮೀನುಗಾರಿಕಾ ಋತುವಿನಲ್ಲಿ ಮಂಜುಗಡ್ಡೆ ಕರಗದಂತೆ ಕಾಪಾಡಲು ಘಟಕಗಳನ್ನು ನಿರಂತರ ಚಾಲನೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬರುತ್ತದೆ ಎಂದೂ ಅವರು ಅಳಲು ತೋಡಿಕೊಳ್ಳುತ್ತಾರೆ.</p>.<p>ಜಿಲ್ಲೆಯಲ್ಲಿ ಅಂದಾಜು 90ರಷ್ಟು ಮಂಜುಗಡ್ಡೆ ಘಟಕಗಳಿದ್ದು, ಅದರಲ್ಲಿ 70ರಷ್ಟು ಮಲ್ಪೆಯಲ್ಲಿವೆ. ಕೆಲ ವರ್ಷಗಳ ಹಿಂದೆ ಮಲ್ಪೆಯಲ್ಲಿ ನೂರಕ್ಕೂ ಹೆಚ್ಚು ಐಸ್ ಪ್ಲಾಂಟ್ಗಳಿದ್ದವು. ನಿರ್ವಹಣೆ ಸಾಧ್ಯವಾಗದೆ ಬಹುತೇಕ ಪ್ಲಾಂಟ್ಗಳು ಬಾಗಿಲು ಮುಚ್ಚಿವೆ ಎಂದು ಮಲ್ಪೆಯ ಮಂಜುಗಡ್ಡೆ ಘಟಕವೊಂದರ ಮಾಲೀಕರೊಬ್ಬರು ತಿಳಿಸಿದರು.</p>.<p>ಮಂಜುಗಡ್ಡೆ ಉತ್ಪಾದನಾ ವೆಚ್ಚವೇ ಅಧಿಕವಾಗಿ ಲಾಭ ಕನಿಷ್ಠವಾಗಿದೆ. ಹಲವಾರು ವರ್ಷಗಳಿಂದ ಇದೇ ಉದ್ಯಮ ನಡೆಸುತ್ತಿರುವುದರಿಂದ ಇದರಲ್ಲೇ ಮುಂದುವರಿದಿದ್ದೇವೆ. ಮುಂಬರುವ ಮೀನುಗಾರಿಕಾ ಋತುವಿನಲ್ಲೂ ಮತ್ಸ್ಯಕ್ಷಾಮ ತಲೆದೋರಿದರೆ ನಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಹೇಳಿದರು.</p>.<p>ಕಾರ್ಮಿಕರ ಕೂಲಿ, ಅಮೋನಿಯಾ ಸಿಲಿಂಡರ್ಗಳ ವೆಚ್ಚ ಕೂಡ ನಮಗೆ ಹೊರೆಯಾಗಿ ಪರಿಣಮಿಸಿದೆ. ಮೀನುಗಾರಿಕೆ ಉತ್ತಮವಾಗಿ ನಡೆದರೆ ಮಾತ್ರ ನಮಗೂ ಲಾಭವಾಗುತ್ತದೆ ಎಂದೂ ಅವರು ತಿಳಿಸಿದರು.</p>.<p>ಮೀನುಗಾರಿಕಾ ಋತುವಿನಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಯಾಂತ್ರೀಕೃತ ದೋಣಿಗಳು ಸಮುದ್ರದಲ್ಲಿ ಹಿಡಿದ ಮೀನುಗಳು ಕೆಡದಂತೆ ಇರಿಸಿಕೊಳ್ಳಲು ಟನ್ಗಟ್ಟಲೆ ಮಂಜುಗಡ್ಡೆಯನ್ನು ಹೇರಿಕೊಂಡು ಹೋಗುತ್ತವೆ. ಇದರಿಂದ ಮಂಜುಗಡ್ಡೆ ಉದ್ಯಮಕ್ಕೂ ಲಾಭವಾಗುತ್ತದೆ. </p>.<p> ಮತ್ಸ್ಯಕ್ಷಾಮ ತಲೆದೋರಿದರೆ ಮಂಜುಗಡ್ಡೆಗೂ ಬೇಡಿಕೆ ಕುಸಿತ ವಿದ್ಯುತ್ ಬಿಲ್ ಪಾವತಿಗೆ ಪರದಾಟ ಲಾಭವಿಲ್ಲದೆ ಬಾಗಿಲು ಮುಚ್ಚುತ್ತಿರುವ ಘಟಕಗಳು</p>.<div><blockquote>ಪ್ರತಿವರ್ಷ ಮಳೆಗಾಲದಲ್ಲಿ ಊರಿಗೆ ಹೋಗುತ್ತಿದ್ದೆ. ಈ ವರ್ಷ ಹೋಗಿಲ್ಲ. ಮಂಜುಗಡ್ಡೆ ಉತ್ಪಾದನೆ ನಡೆಯದಿದ್ದರೂ ಘಟಕದಲ್ಲಿ ಸಣ್ಣಪುಟ್ಟ ಕೆಲಸಗಳಿರುತ್ತವೆ </blockquote><span class="attribution">ಸಮರೇಶ್ ಮಂಜುಗಡ್ಡೆ ಘಟಕದ ಕಾರ್ಮಿಕ</span></div>.<p> ‘ಸಹಾಯಧನ ಹೆಚ್ಚಿಸಬೇಕು’ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮಂಜುಗಡ್ಡೆ ಘಟಕಗಳು ಕಾರ್ಯಾಚರಿಸುವುದಿಲ್ಲ. ಈ ವೇಳೆ ಘಟಕಗಳ ನಿರ್ವಹಣಾ ಕೆಲಸಗಳನ್ನು ನಡೆಸುತ್ತೇವೆ ಎನ್ನುತ್ತಾರೆ ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ರಾಜ್ಯ ಘಟಕ ಕಾರ್ಯದರ್ಶಿ ಉದಯ ಕುಮಾರ್. ವಿದ್ಯುತ್ ಬಿಲ್ ಪಾವತಿಯೇ ನಮಗೆ ದುಬಾರಿಯಾಗಿ ಕಾಡುತ್ತಿದೆ. ವಿದ್ಯುತ್ ಬಿಲ್ಗೆ ಸರ್ಕಾರದಿಂದ ವರ್ಷಕ್ಕೆ ₹ 2 ಲಕ್ಷ ಸಹಾಯ ಧನ ಸಿಗುತ್ತದೆ. ಆದರೆ ಅದು ಯಾವುದಕ್ಕೂ ಸಾಲದು. ಒಂದೊಂದು ಘಟಕಗಳು ಪ್ರತಿ ತಿಂಗಳು ₹ 5 ಲಕ್ಷದಷ್ಟು ವಿದ್ಯುತ್ ಬಿಲ್ ಪಾವತಿಸುತ್ತವೆ. ಸರ್ಕಾರ ಸಹಾಯಧನ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>