ಕನಿಷ್ಠ 10 ಕಲಾವಿದರನ್ನು ಒಳಗೊಂಡ ಕಲಾತಂಡಗಳಿಗೆ ಗೌರವಧನ ನೀಡಲಾಗುತ್ತಿದ್ದು, ಉಡುಪಿ ತಾಲ್ಲೂಕಿನ ತಂಡಗಳಿಗೆ ₹ 5,000, ಬ್ರಹ್ಮಾವರ, ಕಾಪು ತಾಲ್ಲೂಕಿನ ತಂಡಗಳಿಗೆ ₹ 7,000, ಬೈಂದೂರು, ಕಾರ್ಕಳ, ಹೆಬ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಲಾತಂಡಗಳಿಗೆ ₹ 10,000 ನೀಡಲಾಗುವುದು. ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ ಇರಲಿದೆ. ಭಾಗವಹಿಸುವ ಪ್ರತಿ ಕಲಾವಿದರಿಗೆ ₹ 2,000 ಗೌರವಧನ ನೀಡಲಾಗುವುದು.