ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ ಆಯೋಜಿಸಿದ್ದ ‘ಜಾಗತಿಕ ರಾಜಕೀಯ ಮತ್ತು ಅಹಿಂಸೆ’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ವಿಶ್ವಾತ್ಮಕತೆಯೇ ಭಾರತೀಯ ಚಿಂತನಾ ವಿಧಾನವನ್ನು ವ್ಯಾಖ್ಯಾನಿಸುತ್ತದೆ. ಸನಾತನ ಧರ್ಮ, ಬೌದ್ಧಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಮತ್ತೆಲ್ಲಾ ಧರ್ಮಗಳು ಪರಸ್ಪರ ಸಹಬಾಳ್ವೆ ಮಾಡಬೇಕು. ಈ ಎಲ್ಲದರ ಜೈವಿಕ ರಚನೆ ಒಂದೇ ಆಗಿದೆ ಎಂದರು.