<p><strong>ಕುಂದಾಪುರ</strong>: ‘ಕೃಷಿ ಕಾರ್ಯದ ಬಳಕೆಗೆ ಯಂತ್ರಗಳ ಜೊತೆಗೆ ಅದನ್ನು ಬಳಸಲು ತಿಳಿದಿರುವ ಅನುಭವಿಗಳು ಬೇಕು. ಯಾಂತ್ರೀಕೃತ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿ ಈ ರೀತಿಯ ಕೃಷಿ ಕಾರ್ಯಕ್ಕೆ ಒತ್ತು ನೀಡಬೇಕಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.</p>.<p>ಕೋಟೇಶ್ವರದ ಹಾಲಾಡಿ ರಸ್ತೆಯ ಗುರುಕೃಪಾ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಕಚೇರಿ-2 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉಡುಪಿ ಜಿಲ್ಲೆಯಲ್ಲಿ ಕಾಪು, ಹೆಬ್ರಿ ಸೇರಿದಂತೆ ಕುಂದಾಪುರ-2 ಸೇರ್ಪಡೆ ಮೂಲಕ ಈಗ 9 ಯೋಜನಾ ಕಚೇರಿಗಳಾಗಿದ್ದು, ತೆಕ್ಕಟ್ಟೆ, ಕೋಟೇಶ್ವರ, ಕಾಳಾವರ, ಸಿದ್ದಾಪುರ, ಹಾಲಾಡಿ, ಅಮಾಸೆಬೈಲು ವಲಯಗಳಿಗೆ ಪ್ರತ್ಯೇಕವಾಗಿ ಕುಂದಾಪುರ-2 ಕಚೇರಿ ತೆರೆಯಲಾಗಿದೆ ಎಂದು ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.</p>.<p>ರಾಜ್ಯದಲ್ಲಿ ಅತಿಹೆಚ್ಚು ಅಂದರೆ ಸುಮಾರು 7 ಸಾವಿರದಷ್ಟು ಸ್ವಸಹಾಯ ಸಂಘಗಳಿರುವ ಅವಿಭಜಿತ ಕುಂದಾಪುರ ತಾಲ್ಲೂಕಿನಲ್ಲಿಯೇ ರಾಜ್ಯದಲ್ಲಿ ಪ್ರಥಮ ರೈತ ಉತ್ಪಾದಕ ಕೇಂದ್ರ ಯಂತ್ರಶ್ರೀ ಆರಂಭವಾಗಿದೆ. ಈ ಯೋಜನೆಯಿಂದಾಗಿ ಪಾರಂಪರಿಕ ಭತ್ತ ಬೇಸಾಯಕ್ಕೆ ಯಂತ್ರಶಕ್ತಿ ಹೊಸ ಕಾಯಕಲ್ಪ ನೀಡಲಾಗಿತ್ತು. ಪ್ರಗತಿ ನಿಧಿ ಬಳಕೆಯಲ್ಲಿ ಈ ಪ್ರದೇಶ ಮುಂಚೂಣಿಯಲ್ಲಿ ಇದೆ. 2002ರಲ್ಲಿ ಕುಂದಾಪುರಕ್ಕೆ ನಗರ ಯೋಜನೆ ಮೂಲಕ ಕಾಲಿರಿಸಿ 2005ರಲ್ಲಿ ಗ್ರಾಮಾಂತರಕ್ಕೆ ವಿಸ್ತಾರಗೊಂಡ ಯೋಜನೆ ಇಂದು ಮನೆ ಮಾತಾಗಿದೆ ಎಂದರು.</p>.<p>ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಶಂಕರ ಶೆಟ್ಟಿ, ಕಟ್ಟಡದ ಮಾಲೀಕ ರಮೇಶ್ ಪೂಜಾರಿ, ಜನಜಾಗೃತಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಪ್ರಗತಿಬಂಧು ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾಚಂದ್ರ ಇದ್ದರು.</p>.<p>ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಲ್.ಎಚ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿದರು. ತಾಲ್ಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ</strong>: ‘ಕೃಷಿ ಕಾರ್ಯದ ಬಳಕೆಗೆ ಯಂತ್ರಗಳ ಜೊತೆಗೆ ಅದನ್ನು ಬಳಸಲು ತಿಳಿದಿರುವ ಅನುಭವಿಗಳು ಬೇಕು. ಯಾಂತ್ರೀಕೃತ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿ ಈ ರೀತಿಯ ಕೃಷಿ ಕಾರ್ಯಕ್ಕೆ ಒತ್ತು ನೀಡಬೇಕಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.</p>.<p>ಕೋಟೇಶ್ವರದ ಹಾಲಾಡಿ ರಸ್ತೆಯ ಗುರುಕೃಪಾ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಕಚೇರಿ-2 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉಡುಪಿ ಜಿಲ್ಲೆಯಲ್ಲಿ ಕಾಪು, ಹೆಬ್ರಿ ಸೇರಿದಂತೆ ಕುಂದಾಪುರ-2 ಸೇರ್ಪಡೆ ಮೂಲಕ ಈಗ 9 ಯೋಜನಾ ಕಚೇರಿಗಳಾಗಿದ್ದು, ತೆಕ್ಕಟ್ಟೆ, ಕೋಟೇಶ್ವರ, ಕಾಳಾವರ, ಸಿದ್ದಾಪುರ, ಹಾಲಾಡಿ, ಅಮಾಸೆಬೈಲು ವಲಯಗಳಿಗೆ ಪ್ರತ್ಯೇಕವಾಗಿ ಕುಂದಾಪುರ-2 ಕಚೇರಿ ತೆರೆಯಲಾಗಿದೆ ಎಂದು ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.</p>.<p>ರಾಜ್ಯದಲ್ಲಿ ಅತಿಹೆಚ್ಚು ಅಂದರೆ ಸುಮಾರು 7 ಸಾವಿರದಷ್ಟು ಸ್ವಸಹಾಯ ಸಂಘಗಳಿರುವ ಅವಿಭಜಿತ ಕುಂದಾಪುರ ತಾಲ್ಲೂಕಿನಲ್ಲಿಯೇ ರಾಜ್ಯದಲ್ಲಿ ಪ್ರಥಮ ರೈತ ಉತ್ಪಾದಕ ಕೇಂದ್ರ ಯಂತ್ರಶ್ರೀ ಆರಂಭವಾಗಿದೆ. ಈ ಯೋಜನೆಯಿಂದಾಗಿ ಪಾರಂಪರಿಕ ಭತ್ತ ಬೇಸಾಯಕ್ಕೆ ಯಂತ್ರಶಕ್ತಿ ಹೊಸ ಕಾಯಕಲ್ಪ ನೀಡಲಾಗಿತ್ತು. ಪ್ರಗತಿ ನಿಧಿ ಬಳಕೆಯಲ್ಲಿ ಈ ಪ್ರದೇಶ ಮುಂಚೂಣಿಯಲ್ಲಿ ಇದೆ. 2002ರಲ್ಲಿ ಕುಂದಾಪುರಕ್ಕೆ ನಗರ ಯೋಜನೆ ಮೂಲಕ ಕಾಲಿರಿಸಿ 2005ರಲ್ಲಿ ಗ್ರಾಮಾಂತರಕ್ಕೆ ವಿಸ್ತಾರಗೊಂಡ ಯೋಜನೆ ಇಂದು ಮನೆ ಮಾತಾಗಿದೆ ಎಂದರು.</p>.<p>ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಶಂಕರ ಶೆಟ್ಟಿ, ಕಟ್ಟಡದ ಮಾಲೀಕ ರಮೇಶ್ ಪೂಜಾರಿ, ಜನಜಾಗೃತಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಪ್ರಗತಿಬಂಧು ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾಚಂದ್ರ ಇದ್ದರು.</p>.<p>ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಲ್.ಎಚ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿದರು. ತಾಲ್ಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>