<p><strong>ಉಡುಪಿ</strong>: ಕರಾವಳಿಯ ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನದ ಕಂಪು ಈಗ ಉತ್ತರ ಭಾರತಕ್ಕೂ ಪಸರಿಸುತ್ತಿದೆ.</p>.<p>ಉತ್ತರ ಪ್ರದೇಶದ ವಾರಾಣಸಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ (ಎನ್.ಎಸ್.ಡಿ) ರಂಗ ಶಿಕ್ಷಣ ಪಡೆಯುತ್ತಿರುವ 20 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಬಂದು ಇಲ್ಲಿನ ಅದಮಾರು ಮಠದ ಛತ್ರದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.</p>.<p>ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ತರಬೇತಿಯಲ್ಲಿ ಪಳಗುತ್ತಿರುವ ಉತ್ತರ ಭಾರತದ ವಿದ್ಯಾರ್ಥಿಗಳು, ಕರಾವಳಿ ಕಲೆಯ ಬಗ್ಗೆ ಸಮಗ್ರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಒಟ್ಟು 20 ಮಂದಿ ವಿದ್ಯಾರ್ಥಿಗಳಲ್ಲಿ 9 ಮಂದಿ ವಿದ್ಯಾರ್ಥಿನಿಯರೂ ಇದ್ದಾರೆ. ಈ ವಿದ್ಯಾರ್ಥಿಗಳು ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ವಿಮ ಬಂಗಾಳ ಮೂಲದವರು.</p>.<p>ಒಂದು ತಿಂಗಳ ಯಕ್ಷಗಾನ ತರಬೇತಿಗಾಗಿ ಇವರನ್ನು ಎನ್.ಎಸ್.ಡಿ. ಕಳುಹಿಸಿಕೊಟ್ಟಿದೆ. ಸಂಸ್ಥೆಯ ನಿರ್ದೇಶಕ ಪ್ರವೀಣ್ ಕುಮಾರ್ ಗುಂಜನ್ ಅವರೂ ವಿದ್ಯಾರ್ಥಿಗಳ ಜೊತೆಗೆ ಉಡುಪಿಗೆ ಬಂದು ಮಾರ್ಗದರ್ಶನ ನೀಡುತ್ತಿದ್ದಾರೆ.</p>.<p>ಪ್ರತಿದಿನ ಬೆಳಿಗ್ಗೆ 5ರಿಂದ 8ರ ವರೆಗೆ, ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ, ಸಂಜೆ 3ರಿಂದ 7ರವರೆಗೆ ಯಕ್ಷನಗಾನ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯಕ್ಷಗಾನ ಕಲೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.</p>.<p>‘ಕಲಿಕೆಯ ಅಂಗವಾಗಿ ಕೇರಳದ ‘ಕಳರಿಪಯಟ್ಟು’, ಜಾರ್ಖಂಡ್ನ ‘ಚಾವ್’ ಕಲೆಯನ್ನೂ ಅಭ್ಯಸಿಸಿದ್ದೇವೆ ಯಕ್ಷಗಾನ ಕಲೆ ಮಾತ್ರ ನಮಗೆ ತುಂಬಾ ಆಪ್ತ ಎನಿಸುತ್ತಿದೆ’ ಎಂದು ತರಬೇತಿ ಪಡೆಯುತ್ತಿರುವ ಪವನ್ ಸಿಂಗ್ ಗೌರ್ ತಿಳಿಸಿದರು.</p>.<p>‘ಬಿಡುವಿನ ಸಂದರ್ಭದಲ್ಲೂ ನಾವು ಯಕ್ಷಗಾನದ ನಾಟ್ಯ ಅಭ್ಯಾಸ ಮಾಡುತ್ತಿದ್ದೇವೆ. ಕಡಿಮೆ ಅವಧಿಯಲ್ಲಿ ಸಾಗರದಂತಹ ಕಲೆಯನ್ನು ಕಲಿಯುವುದು ಕಷ್ಟ ಸಾಧ್ಯ. ಸಾಧ್ಯವಾದಷ್ಟು ಕಲಿಯಬೇಕು, ಕಲಿತ ಕಲೆಗಳನ್ನು ಎಲ್ಲೆಡೆ ಪಸರಿಸಬೇಕು ಎನ್ನುತ್ತಾರೆ ಪವನ್.</p>.<p>ವಿದ್ಯಾರ್ಥಿಗಳಿಗೆ ನಾಟ್ಯ, ಅಭಿನಯದ ತರಬೇತಿ ನೀಡಲಾಗುತ್ತದೆ. ರಾಗ, ಸಪ್ತ ತಾಳಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ತಿಳಿಸಿದರು.</p>.<p>‘ಪೂರ್ವರಂಗ’ದ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ವೇಷಭೂಷಣ, ಮುಖವರ್ಣಿಕೆ ಬಗ್ಗೆಯೂ ಕಲಿಸಲಾಗುತ್ತಿದೆ. ಇದೇ 25 ಮತ್ತು 26ರಂದು ಈ ವಿದ್ಯಾರ್ಥಿಗಳು ‘ಏಕಲವ್ಯ’ ಪ್ರಸಂಗದ ಯಕ್ಷಗಾನ ಪ್ರರ್ಶಿಸಲಿದ್ದಾರೆ ಎಂದು ಅವರು ವಿವರಿಸಿದರು.ಯಕ್ಷಗಾನ ಅದ್ಬುತ ಕಲೆ. ಇದನ್ನು ಅಭ್ಯಾಸ ಮಾಡಿದರೆ ಬೇರೆ ಎಲ್ಲಾ ಕಲಾರೂಪಗಳನ್ನು ಸುಲಭವಾಗಿ ಕಲಿಯಬಹುದು. ತರಬೇತಿ ತುಂಬಾ ಖುಷಿ ಕೊಟ್ಟಿದೆ</p>.<div><blockquote>ಇಲ್ಲಿನವರೇ ಯಕ್ಷಗಾನ ಕಲಿಯುವಲ್ಲಿ ಹಿಂದೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಬಂದು ತರಬೇತಿ ಪಡೆಯುತ್ತಿರುವುದು ಸಂತಸದ ವಿಚಾರ</blockquote><span class="attribution">ಬನ್ನಂಜೆ ಸಂಜೀವ ಸುವರ್ಣ ಯಕ್ಷ ಗುರು</span></div>.<div><blockquote>ಯಕ್ಷಗಾನ ಅದ್ಬುತ ಕಲೆ. ಇದನ್ನು ಅಭ್ಯಾಸ ಮಾಡಿದರೆ ಬೇರೆ ಎಲ್ಲಾ ಕಲಾರೂಪಗಳನ್ನು ಸುಲಭವಾಗಿ ಕಲಿಯಬಹುದು. ತರಬೇತಿ ತುಂಬಾ ಖುಷಿ ಕೊಟ್ಟಿದೆ</blockquote><span class="attribution">ಪವನ್ ಸಿಂಗ್ ಗೌರ್ ವಿದ್ಯಾರ್ಥಿ ಎನ್.ಎಸ್.ಡಿ. ವಾರಾಣಸಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಕರಾವಳಿಯ ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನದ ಕಂಪು ಈಗ ಉತ್ತರ ಭಾರತಕ್ಕೂ ಪಸರಿಸುತ್ತಿದೆ.</p>.<p>ಉತ್ತರ ಪ್ರದೇಶದ ವಾರಾಣಸಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ (ಎನ್.ಎಸ್.ಡಿ) ರಂಗ ಶಿಕ್ಷಣ ಪಡೆಯುತ್ತಿರುವ 20 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಬಂದು ಇಲ್ಲಿನ ಅದಮಾರು ಮಠದ ಛತ್ರದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.</p>.<p>ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ತರಬೇತಿಯಲ್ಲಿ ಪಳಗುತ್ತಿರುವ ಉತ್ತರ ಭಾರತದ ವಿದ್ಯಾರ್ಥಿಗಳು, ಕರಾವಳಿ ಕಲೆಯ ಬಗ್ಗೆ ಸಮಗ್ರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಒಟ್ಟು 20 ಮಂದಿ ವಿದ್ಯಾರ್ಥಿಗಳಲ್ಲಿ 9 ಮಂದಿ ವಿದ್ಯಾರ್ಥಿನಿಯರೂ ಇದ್ದಾರೆ. ಈ ವಿದ್ಯಾರ್ಥಿಗಳು ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ವಿಮ ಬಂಗಾಳ ಮೂಲದವರು.</p>.<p>ಒಂದು ತಿಂಗಳ ಯಕ್ಷಗಾನ ತರಬೇತಿಗಾಗಿ ಇವರನ್ನು ಎನ್.ಎಸ್.ಡಿ. ಕಳುಹಿಸಿಕೊಟ್ಟಿದೆ. ಸಂಸ್ಥೆಯ ನಿರ್ದೇಶಕ ಪ್ರವೀಣ್ ಕುಮಾರ್ ಗುಂಜನ್ ಅವರೂ ವಿದ್ಯಾರ್ಥಿಗಳ ಜೊತೆಗೆ ಉಡುಪಿಗೆ ಬಂದು ಮಾರ್ಗದರ್ಶನ ನೀಡುತ್ತಿದ್ದಾರೆ.</p>.<p>ಪ್ರತಿದಿನ ಬೆಳಿಗ್ಗೆ 5ರಿಂದ 8ರ ವರೆಗೆ, ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ, ಸಂಜೆ 3ರಿಂದ 7ರವರೆಗೆ ಯಕ್ಷನಗಾನ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯಕ್ಷಗಾನ ಕಲೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.</p>.<p>‘ಕಲಿಕೆಯ ಅಂಗವಾಗಿ ಕೇರಳದ ‘ಕಳರಿಪಯಟ್ಟು’, ಜಾರ್ಖಂಡ್ನ ‘ಚಾವ್’ ಕಲೆಯನ್ನೂ ಅಭ್ಯಸಿಸಿದ್ದೇವೆ ಯಕ್ಷಗಾನ ಕಲೆ ಮಾತ್ರ ನಮಗೆ ತುಂಬಾ ಆಪ್ತ ಎನಿಸುತ್ತಿದೆ’ ಎಂದು ತರಬೇತಿ ಪಡೆಯುತ್ತಿರುವ ಪವನ್ ಸಿಂಗ್ ಗೌರ್ ತಿಳಿಸಿದರು.</p>.<p>‘ಬಿಡುವಿನ ಸಂದರ್ಭದಲ್ಲೂ ನಾವು ಯಕ್ಷಗಾನದ ನಾಟ್ಯ ಅಭ್ಯಾಸ ಮಾಡುತ್ತಿದ್ದೇವೆ. ಕಡಿಮೆ ಅವಧಿಯಲ್ಲಿ ಸಾಗರದಂತಹ ಕಲೆಯನ್ನು ಕಲಿಯುವುದು ಕಷ್ಟ ಸಾಧ್ಯ. ಸಾಧ್ಯವಾದಷ್ಟು ಕಲಿಯಬೇಕು, ಕಲಿತ ಕಲೆಗಳನ್ನು ಎಲ್ಲೆಡೆ ಪಸರಿಸಬೇಕು ಎನ್ನುತ್ತಾರೆ ಪವನ್.</p>.<p>ವಿದ್ಯಾರ್ಥಿಗಳಿಗೆ ನಾಟ್ಯ, ಅಭಿನಯದ ತರಬೇತಿ ನೀಡಲಾಗುತ್ತದೆ. ರಾಗ, ಸಪ್ತ ತಾಳಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ತಿಳಿಸಿದರು.</p>.<p>‘ಪೂರ್ವರಂಗ’ದ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ವೇಷಭೂಷಣ, ಮುಖವರ್ಣಿಕೆ ಬಗ್ಗೆಯೂ ಕಲಿಸಲಾಗುತ್ತಿದೆ. ಇದೇ 25 ಮತ್ತು 26ರಂದು ಈ ವಿದ್ಯಾರ್ಥಿಗಳು ‘ಏಕಲವ್ಯ’ ಪ್ರಸಂಗದ ಯಕ್ಷಗಾನ ಪ್ರರ್ಶಿಸಲಿದ್ದಾರೆ ಎಂದು ಅವರು ವಿವರಿಸಿದರು.ಯಕ್ಷಗಾನ ಅದ್ಬುತ ಕಲೆ. ಇದನ್ನು ಅಭ್ಯಾಸ ಮಾಡಿದರೆ ಬೇರೆ ಎಲ್ಲಾ ಕಲಾರೂಪಗಳನ್ನು ಸುಲಭವಾಗಿ ಕಲಿಯಬಹುದು. ತರಬೇತಿ ತುಂಬಾ ಖುಷಿ ಕೊಟ್ಟಿದೆ</p>.<div><blockquote>ಇಲ್ಲಿನವರೇ ಯಕ್ಷಗಾನ ಕಲಿಯುವಲ್ಲಿ ಹಿಂದೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಬಂದು ತರಬೇತಿ ಪಡೆಯುತ್ತಿರುವುದು ಸಂತಸದ ವಿಚಾರ</blockquote><span class="attribution">ಬನ್ನಂಜೆ ಸಂಜೀವ ಸುವರ್ಣ ಯಕ್ಷ ಗುರು</span></div>.<div><blockquote>ಯಕ್ಷಗಾನ ಅದ್ಬುತ ಕಲೆ. ಇದನ್ನು ಅಭ್ಯಾಸ ಮಾಡಿದರೆ ಬೇರೆ ಎಲ್ಲಾ ಕಲಾರೂಪಗಳನ್ನು ಸುಲಭವಾಗಿ ಕಲಿಯಬಹುದು. ತರಬೇತಿ ತುಂಬಾ ಖುಷಿ ಕೊಟ್ಟಿದೆ</blockquote><span class="attribution">ಪವನ್ ಸಿಂಗ್ ಗೌರ್ ವಿದ್ಯಾರ್ಥಿ ಎನ್.ಎಸ್.ಡಿ. ವಾರಾಣಸಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>