ನದಿಯಿಂದ ನೀರು ಜಮೀನಿಗೆ ಬರುವಲ್ಲಿ ಕಲ್ಲು, ಕಾಂಕ್ರೀಟ್ನ ಕಟ್ಟೆಯನ್ನು ನಿರ್ಮಿಸಲಾಗಿದೆ. ಅದಕ್ಕೆ ಎರಡು ಗೇಟ್ಗಳನ್ನು ಅಳವಡಿಸಲು ವ್ಯವಸ್ಥೆಯಿದೆ. ಆದರೆ, ಅವುಗಳಲ್ಲಿ ಇರಬೇಕಿದ್ದ ಹಲಗೆಗಳು ಕಾಣೆಯಾಗಿವೆ. ಇದರ ಪರಿಣಾಮ, ಉಪ್ಪು ನೀರು ಜಮೀನಿಗೆ ಹರಿದು ಅಲ್ಲಿ ಇಂಗುತ್ತಿದೆ. ಅಂತರ್ಜಲದೊಂದಿಗೆ ಸೇರಿಕೊಂಡು ಮಾರ್ಚ್ ಆರಂಭದಿಂದಲೇ ಬಾವಿಗಳ ನೀರು ಬಳಕೆಗೆ ಸಿಗದಂತಾಗುತ್ತಿದೆ.