‘ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಶಾ ಕಾರ್ಯಕರ್ತೆಯರ ತಿಂಗಳ ಗೌರವಧನವನ್ನು ₹ 10 ಸಾವಿರಕ್ಕೆಹೆಚ್ಚಿಸುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಮಾತಿನಂತೆ ಅವರು ನಡೆದುಕೊಂಡಿಲ್ಲ.ಇನ್ನೊಂದು ಕಡೆ, ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್ಲೈನ್ಪೋರ್ಟಲ್ನಲ್ಲಿ ದಾಖಲಿಸಲು ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವ ನೆಪದಲ್ಲಿ ವಿಳಂಬ ನೀತಿಯಿಂದಾಗಿ 2018ಮತ್ತು 2019ರಲ್ಲಿ ಸುಮಾರು 15 ತಿಂಗಳು ಪ್ರತಿ ಕಾರ್ಯಕರ್ತೆಗೆ ಬರಬೇಕಾಗಿದ್ದ ₹ 15 ಸಾವಿರದಿಂದ ₹ 25 ಸಾವಿರದಷ್ಟು ಹಣ ಬರಲೇ ಇಲ್ಲ’ ಎಂದು ದೂರಿದರು.