ವೈರಸ್ ಪೀಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಕ್ಕೆ ಔಷಧ ಕಂಡುಹಿಡಿಯಲಾಗದ ಕಾರಣ ದೇವರ ಮೊರೆ ಹೋಗಬೇಕಾಗಿದೆ. ಜೂನ್ 30ರೊಳಗೆ ಪ್ರತಿ ವ್ಯಕ್ತಿ ಕನಿಷ್ಠ 100 ಸಲವಾದರೂ ಇದರ ಪಠಣ ಮಾಡಬೇಕು. ಕೇವಲ ತನ್ನ ಆರೋಗ್ಯಕ್ಕೆ ಮಾತ್ರವಲ್ಲ, ಎಲ್ಲರ ಆರೋಗ್ಯಕ್ಕಾಗಿ ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿ, ದಿನವೊಂದಕ್ಕೆ ಎರಡು ಸಲ, ಪ್ರಯತ್ನ ಪಟ್ಟರೆ ಮೂರು ಸಲ ಪಠಿಸಬಹುದು. ಹೆಚ್ಚು ಜನ ಪಠಿಸಿದಾಗ ಉತ್ತಮವಾದ ಶಕ್ತಿ ನಿರ್ಮಾಣವಾಗುತ್ತದೆ. ಅದರಿಂದ ಸಮಾಜವನ್ನು ರೋಗಮುಕ್ತ ಮಾಡಲು ಸಾಧ್ಯವಾಗಬಹುದು.