ಬನವಾಸಿ ಸುತ್ತಲಿನ ಕೃಷಿ ಕಾರ್ಮಿಕರು ಸ್ಥಳೀಯವಾಗಿ ಅಥವಾ ತಾಲ್ಲೂಕಿನ ಪಶ್ಚಿಮ ಭಾಗದ ರೈತರ ತೋಟಗಳಲ್ಲಿ ದುಡಿಯುತ್ತಾರೆ. ಆದರೆ, ದಾಸನಕೊಪ್ಪ, ರಂಗಾಪುರ, ಕಲಕೊಪ್ಪ ಮೊದಲಾದ ಊರುಗಳು ಕೃಷಿ ಕಾರ್ಮಿಕರು ಬೇಸಿಗೆ ಬಂತೆಂದರೆ, ಕಾಫಿ ಸೀಮೆಯಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಹೀಗೆ ಗುಳೆ ಹೋದವರು ಮತ್ತೆ ತಿರುಗಿ ಊರಿಗೆ ಬರುವುದು ಮಳೆಗಾಲ ಆರಂಭದ ಹೊತ್ತಿಗೆ.