ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ರೈಲುಗಳ ಸಂಚಾರಕ್ಕೆ ನಿಗಮವು ವ್ಯವಸ್ಥೆ ಮಾಡಿದೆ. ಒಟ್ಟು67,178 ಕಾರ್ಮಿಕರು ಪ್ರಯಾಣಿಸಿದ್ದಾರೆ. ಅವರಲ್ಲಿ ಉಡುಪಿ, ಮಡಗಾಂ, ಥಿವಿಮ್, ಕರ್ಮಾಲಿ, ಸಿಂಧುದುರ್ಗ, ರತ್ನಗಿರಿ ಹಾಗೂ ಚಿಪ್ಲುನ್ ನಿಲ್ದಾಣಗಳಿಂದ ಕಾರ್ಮಿಕರು ರೈಲನ್ನೇರಿದ್ದರು ಎಂದು ಕೊಂಕಣ ರೈಲ್ವೆ ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಕೆ.ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.