ನಿತ್ಯ ಪೂಜೆಗೆ ಹಾಗೂ ವಿಶೇಷ ಪೂಜಾ ಕೈಂಕರ್ಯಕ್ಕೆ ಅಗತ್ಯವಿರುವ ಬಂಗಾರದ ಪಾದುಕೆ, ಲಕ್ಷ್ಮೀಹಾರ, ಬೆಳ್ಳಿಯ ತಟ್ಟೆ ಪಾತ್ರೆಗಳು, ಅನಂತಶಯನ, ಛತ್ರ ಚಾಮರಾದಿಗಳು, ಗರುಡ ಕವಚವನ್ನು ಭಕ್ತರು ಸೇವಾರೂಪದಲ್ಲಿ ಸಮರ್ಪಿಸಿದರು. ದೇವರ ಸುಖಶಯನವನ್ನು ಕಲ್ಪಿಸುವ ತೊಟ್ಟಿಲು, ತಂಗಾಳಿಯನ್ನು ಕಲ್ಪಿಸುವ ಚಾಮರ, ಛತ್ರ, ದರ್ಪಣ, ಬೀಸಣಿಕೆ ಅರ್ಪಿಸಲಾಯಿತು. ಮಂಜುಗುಣಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ನೇತೃತ್ವದಲ್ಲಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರಹೋಮ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಪೂರ್ಣಾಹುತಿ ನಡೆದವು.