ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟರಮಣನಿಗೆ ರಾಜಭೋಗ ಅರ್ಪಣೆ

Last Updated 3 ಅಕ್ಟೋಬರ್ 2019, 15:51 IST
ಅಕ್ಷರ ಗಾತ್ರ

ಶಿರಸಿ: ಶರನ್ನವರಾತ್ರಿ ಅಂಗವಾಗಿ ತಾಲ್ಲೂಕಿನ ಮಂಜುಗುಣಿಯ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಗುರುವಾರ ದೇವರಿಗೆ ರಾಜಭೋಗಾರ್ಪಣೆ ಕಾರ್ಯಕ್ರಮ ಸಂಪನ್ನಗೊಂಡಿತು.

ನಿತ್ಯ ಪೂಜೆಗೆ ಹಾಗೂ ವಿಶೇಷ ಪೂಜಾ ಕೈಂಕರ್ಯಕ್ಕೆ ಅಗತ್ಯವಿರುವ ಬಂಗಾರದ ಪಾದುಕೆ, ಲಕ್ಷ್ಮೀಹಾರ, ಬೆಳ್ಳಿಯ ತಟ್ಟೆ ಪಾತ್ರೆಗಳು, ಅನಂತಶಯನ, ಛತ್ರ ಚಾಮರಾದಿಗಳು, ಗರುಡ ಕವಚವನ್ನು ಭಕ್ತರು ಸೇವಾರೂಪದಲ್ಲಿ ಸಮರ್ಪಿಸಿದರು. ದೇವರ ಸುಖಶಯನವನ್ನು ಕಲ್ಪಿಸುವ ತೊಟ್ಟಿಲು, ತಂಗಾಳಿಯನ್ನು ಕಲ್ಪಿಸುವ ಚಾಮರ, ಛತ್ರ, ದರ್ಪಣ, ಬೀಸಣಿಕೆ ಅರ್ಪಿಸಲಾಯಿತು. ಮಂಜುಗುಣಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ನೇತೃತ್ವದಲ್ಲಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರಹೋಮ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಪೂರ್ಣಾಹುತಿ ನಡೆದವು.

ಪ್ರತಿ ವರ್ಷದಂತೆ ವೆಂಕಟೇಶ್ವರನ ಸನ್ನಿಧಿಯಲ್ಲಿ ಅಖಂಡ ಭಜನಾ ಕಾರ್ಯಕ್ರಮ ಸೆ.29ರಿಂದ ಅ.4 ತನಕ ಐದು ದಿನಗಳ ಕಾಲ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT