<p><strong>ಕಾರವಾರ:</strong> ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರು ಒದಗಿಸುವ ‘ಜನಜಲ್ ವಾಟರ್ ವೆಂಡಿಂಗ್ ಮೆಶಿನ್’ ಅನ್ನು ಭಟ್ಕಳದಲ್ಲಿ ಈಚೆಗೆ ಉದ್ಘಾಟಿಸಲಾಯಿತು.</p>.<p>ಈ ಯಂತ್ರಕ್ಕೆ ನಾಣ್ಯ ಹಾಕಿ ಅಥವಾ ವಿವಿಧ ಆ್ಯಪ್ಗಳ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಆನ್ಲೈನ್ ಮೂಲಕ ಕೂಡ ಹಣ ಪಾವತಿಸಬಹುದು. ₹ 1ರಲ್ಲಿ 300 ಮಿ.ಲೀ., ₹ 3ಕ್ಕೆ 500 ಮಿ.ಲೀ.,₹ 5ಕ್ಕೆ ಒಂದು ಲೀಟರ್, ₹8ಕ್ಕೆಎರಡು ಲೀಟರ್ ಮತ್ತು₹ 20ಕ್ಕೆ ಐದು ಲೀಟರ್ ನೀರನ್ನು ತಮ್ಮ ಬಾಟಲಿ, ಕ್ಯಾನ್ಗಳಲ್ಲಿ ತುಂಬಿಕೊಳ್ಳಬಹುದು.ಲೋಟದ ಮೂಲಕ ನೀರು<br />ಕುಡಿಯುವವರು ₹ 2 ಪಾವತಿಸಬೇಕಿದೆ.</p>.<p>‘ಈ ಯಂತ್ರದಲ್ಲಿ ನೀರು ಶುದ್ಧವಾಗಿರಲು ಯು.ವಿ ಮತ್ತು ಯು.ಎಫ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಯಂತ್ರದಿಂದ ದಿನದ 24 ಗಂಟೆಯೂಪ್ರಯಾಣಿಕರು ನೀರು ಪಡೆಯಬಹುದು’ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.</p>.<p>ಕೊಂಕಣ ರೈಲ್ವೆಯುಕರ್ನಾಟಕ ವ್ಯಾಪ್ತಿಯ ನಿಲ್ದಾಣಗಳಲ್ಲಿ ಒಟ್ಟು 12 ಘಟಕಗಳನ್ನು ಅಳವಡಿಸುತ್ತಿದೆ.ಈಗಾಗಲೇ ನಾಲ್ಕು ನಿಲ್ದಾಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರು ಒದಗಿಸುವ ‘ಜನಜಲ್ ವಾಟರ್ ವೆಂಡಿಂಗ್ ಮೆಶಿನ್’ ಅನ್ನು ಭಟ್ಕಳದಲ್ಲಿ ಈಚೆಗೆ ಉದ್ಘಾಟಿಸಲಾಯಿತು.</p>.<p>ಈ ಯಂತ್ರಕ್ಕೆ ನಾಣ್ಯ ಹಾಕಿ ಅಥವಾ ವಿವಿಧ ಆ್ಯಪ್ಗಳ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಆನ್ಲೈನ್ ಮೂಲಕ ಕೂಡ ಹಣ ಪಾವತಿಸಬಹುದು. ₹ 1ರಲ್ಲಿ 300 ಮಿ.ಲೀ., ₹ 3ಕ್ಕೆ 500 ಮಿ.ಲೀ.,₹ 5ಕ್ಕೆ ಒಂದು ಲೀಟರ್, ₹8ಕ್ಕೆಎರಡು ಲೀಟರ್ ಮತ್ತು₹ 20ಕ್ಕೆ ಐದು ಲೀಟರ್ ನೀರನ್ನು ತಮ್ಮ ಬಾಟಲಿ, ಕ್ಯಾನ್ಗಳಲ್ಲಿ ತುಂಬಿಕೊಳ್ಳಬಹುದು.ಲೋಟದ ಮೂಲಕ ನೀರು<br />ಕುಡಿಯುವವರು ₹ 2 ಪಾವತಿಸಬೇಕಿದೆ.</p>.<p>‘ಈ ಯಂತ್ರದಲ್ಲಿ ನೀರು ಶುದ್ಧವಾಗಿರಲು ಯು.ವಿ ಮತ್ತು ಯು.ಎಫ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಯಂತ್ರದಿಂದ ದಿನದ 24 ಗಂಟೆಯೂಪ್ರಯಾಣಿಕರು ನೀರು ಪಡೆಯಬಹುದು’ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.</p>.<p>ಕೊಂಕಣ ರೈಲ್ವೆಯುಕರ್ನಾಟಕ ವ್ಯಾಪ್ತಿಯ ನಿಲ್ದಾಣಗಳಲ್ಲಿ ಒಟ್ಟು 12 ಘಟಕಗಳನ್ನು ಅಳವಡಿಸುತ್ತಿದೆ.ಈಗಾಗಲೇ ನಾಲ್ಕು ನಿಲ್ದಾಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>