‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರದೇ ಆದ ಆಡಳಿತಾತ್ಮಕ ಸಮಸ್ಯೆಗಳಿರುತ್ತವೆ. ಸಂಪುಟ ವಿಸ್ತರಣೆ ವಿಚಾರವಾಗಿ ಬಿ.ಜೆ.ಪಿ.ಯ ಕೆಲವು ಶಾಸಕರು, ಸಚಿವರು ಅವರವರ ಅಭಿಪ್ರಾಯ ಹೇಳಿಕೊಂಡಿದ್ದಾರೆ. ನಮ್ಮಲ್ಲಿ ಅಭಿಪ್ರಾಯ ಭೇದವಿಲ್ಲ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಅಂತಿಮವಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಸಕಾಲದಲ್ಲಿ ಎಲ್ಲವೂ ಸುಖಾಂತ್ಯ ಆಗಲಿದೆ. ರಾಜಕಾರಣದಲ್ಲಿ ಗುಡುಗು, ಸಿಡಿಲು ಎಲ್ಲವೂ ಬರುತ್ತಿರುತ್ತವೆ. ಆಮೇಲೆ ತಣ್ಣನೆ ಮಳೆ ಬಂದಾಗ ಭೂಮಿ ತಂಪಾಗುತ್ತದೆ’ ಎಂದು ಹೇಳಿದರು.