ಗ್ರಾಮೀಣ ಭಾಗದ ಹಿತ್ಲಕೈ ಎಂಬ ಹಳ್ಳಿಯ ಗಣಪತಿ ಬಿ. ಹೆಗಡೆ, ನೀನಾಸಂನಲ್ಲಿ ರಂಗಶಿಕ್ಷಣದ ಡಿಪ್ಲೊಮಾ ಪೂರೈಸಿದ್ದಾರೆ. ನೀನಾಸಂ ಶೈಲಿಯ ನಾಟಕಗಳನ್ನು, ತಮ್ಮತನದ ಎರಕದೊಂದಿಗೆ ರಂಜನೀಯವಾಗಿ ಕಟ್ಟುವುದಲ್ಲಿ ಅವರು ಸಿದ್ಧಹಸ್ತರು. ಅವರು ನಟನೆ, ರಂಗಸಿದ್ಧತೆ, ಬೆಳಕು, ವಸ್ತ್ರವಿನ್ಯಾಸ, ನಿರ್ದೇಶನದಲ್ಲಿ ಅಧ್ಯಯನ ಹಾಗೂ ಪ್ರಾಯೋಗಿಕ ಅನುಭವ ಹೊಂದಿದ್ದಾರೆ. ಅವರ ನಾಟಕದ ಪ್ರತಿಭೆಗೆ ಯಕ್ಷಗಾನ ಕಲೆಯ ಹಿನ್ನೆಲೆ ಇದೆ.