‘ಪಿಡಬ್ಲುಡಿ ವ್ಯಾಪ್ತಿಗೆ ಸೇರಬೇಕಾದ ಜಾಗಕ್ಕಷ್ಟೇ ಗುರುತು ಹಾಕಿದ್ದೇವೆ. ಈ ಮೊದಲು ಜನರಿಗೆ ಮನವರಿಕೆ ಮಾಡಿಕೊಡಲು ಮೊದಲ ಹಂತದ ಸಮೀಕ್ಷೆ ನಡೆಯಿತು. ಈ ಬಾರಿ ಸರ್ವೆ, ಕಂದಾಯ ಇಲಾಖೆ ಜತೆಗೂಡಿ ಜಂಟಿ ಸಮೀಕ್ಷೆ ನಡೆಸಿದ್ದೇವೆ. ನಿಯಮ ಪ್ರಕಾರವೇ ಅಳತೆ ಮಾಡಿ ಗುರುತು ಹಾಕಿದ್ದೇವೆ. ತಾರತಮ್ಯದ ಪ್ರಶ್ನೆಯೇ ಇಲ್ಲ’ ಎಂದು ಪಿಡಬ್ಲುಡಿ ಎಂಜಿನಿಯರ್ ಹನುಮಂತ ನಾಯ್ಕ ಪ್ರತಿಕ್ರಿಯಿಸಿದರು.