<p><strong>ಕಾರವಾರ: </strong>ಎರಡು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿರುವ ಈರುಳ್ಳಿ ದರವು, ಜನಸಾಮಾನ್ಯರನ್ನು ಮಾತ್ರವಲ್ಲದೇ ಹೋಟೆಲ್ ಉದ್ಯಮವನ್ನೂಕಂಗೆಡಿಸಿದೆ. ಹಲವು ಹೋಟೆಲ್ಗಳಲ್ಲಿ ಅಡುಗೆಗೆ ಈರುಳ್ಳಿ ಬಳಕೆಯನ್ನೇ ನಿಲ್ಲಿಸಲಾಗಿದೆ.</p>.<p>ನಗರದಲ್ಲಿ ನಾಲ್ಕೈದು ದಿನಗಳಿಂದ ಪ್ರತಿ ಕೆ.ಜಿ.ಈರುಳ್ಳಿಯು ₹ 150ರಂತೆ ಮಾರಾಟವಾಗುತ್ತಿದೆ. ಸುಮಾರು ಒಂದು ತಿಂಗಳ ಹಿಂದೆಯೇ ದರ ಏರಿಕೆಆರಂಭವಾದಾಗ ಕಾಂದಾ ಬಜ್ಜಿ (ಈರುಳ್ಳಿ ಬಜ್ಜಿ) ಹಾಗೂ ಈರುಳ್ಳಿ ಉತ್ತಪ್ಪವನ್ನು ಮೆನುವಿನಿಂದ ಕೈಬಿಡಲಾಗಿತ್ತು. ₹ 100ಕ್ಕಿಂತಲೂ ಹೆಚ್ಚಾದ ಬಳಿಕ ಅಡುಗೆ ಸಾಮಗ್ರಿಯ ಪಟ್ಟಿಯಿಂದಲೇ ಉಳ್ಳಾಗಡ್ಡೆಯನ್ನು ದೂರವಿಡಲಾಗಿದೆ.</p>.<p>ಸದ್ಯಕ್ಕೆ ನಗರದ ವಿವಿಧ ಹೋಟೆಲ್ಗಳಲ್ಲಿ ಈರುಳ್ಳಿ ರಹಿತ ಪಾವ್ ಬಜ್ಜಿ, ಪಾನಿಪುರಿ, ಮಸಾಲೆಪುರಿ, ಸಾರು, ಸಾಂಬಾರು ಸಿಗುತ್ತಿದೆ.ಇದರಿಂದ ರುಚಿಯಲ್ಲಿ ವ್ಯತ್ಯಾಸವಾಗಿ ಹೋಟೆಲ್ ಸಿಬ್ಬಂದಿಜೊತೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುವುದು ನಿತ್ಯದ ದೃಶ್ಯವಾಗಿದೆ.</p>.<p>‘ನಮ್ಮ ಹೋಟೆಲ್ನಲ್ಲಿ ಪ್ರತಿದಿನ ಸುಮಾರು 25 ಕೆ.ಜಿ ಈರುಳ್ಳಿಬಳಕೆಯಾಗುತ್ತದೆ. ಈಗಿನ ದರದಲ್ಲಿ ಸುಮಾರು 50 ಕೆ.ಜಿ.ಗಳ ಒಂದು ಮೂಟೆ ಖರೀದಿಸಲು ₹ 7,500 ಬೇಕು. ದಿನದ ಲಾಭವನ್ನೂ ಮೀರಿ ಕೇವಲ ಒಂದೇ ವಸ್ತುವಿನ ಮೇಲೆ ವ್ಯಯಿಸಬೇಕು. ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ ಅವರಿಗೂ ಹೊರೆಯಾಗುತ್ತದೆ. ಹಾಗಾಗಿ ಇದು ಉದ್ಯಮಕ್ಕೆ ಸಾಧುವಲ್ಲ ಎಂದು ಸದ್ಯಕ್ಕೆ ಈರುಳ್ಳಿಖರೀದಿಯನ್ನುನಿಲ್ಲಿಸಿದ್ದೇವೆ. ದರ ಕಡಿಮೆಯಾದ ಬಳಿಕ ಮತ್ತೆ ಬಳಕೆ ಶುರು ಮಾಡುತ್ತೇವೆ’ ಎಂದು ನಗರದ ಗ್ರೀನ್ಸ್ಟ್ರೀಟ್ನ ಹೋಟೆಲೊಂದರ ಸಿಬ್ಬಂದಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಎರಡು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿರುವ ಈರುಳ್ಳಿ ದರವು, ಜನಸಾಮಾನ್ಯರನ್ನು ಮಾತ್ರವಲ್ಲದೇ ಹೋಟೆಲ್ ಉದ್ಯಮವನ್ನೂಕಂಗೆಡಿಸಿದೆ. ಹಲವು ಹೋಟೆಲ್ಗಳಲ್ಲಿ ಅಡುಗೆಗೆ ಈರುಳ್ಳಿ ಬಳಕೆಯನ್ನೇ ನಿಲ್ಲಿಸಲಾಗಿದೆ.</p>.<p>ನಗರದಲ್ಲಿ ನಾಲ್ಕೈದು ದಿನಗಳಿಂದ ಪ್ರತಿ ಕೆ.ಜಿ.ಈರುಳ್ಳಿಯು ₹ 150ರಂತೆ ಮಾರಾಟವಾಗುತ್ತಿದೆ. ಸುಮಾರು ಒಂದು ತಿಂಗಳ ಹಿಂದೆಯೇ ದರ ಏರಿಕೆಆರಂಭವಾದಾಗ ಕಾಂದಾ ಬಜ್ಜಿ (ಈರುಳ್ಳಿ ಬಜ್ಜಿ) ಹಾಗೂ ಈರುಳ್ಳಿ ಉತ್ತಪ್ಪವನ್ನು ಮೆನುವಿನಿಂದ ಕೈಬಿಡಲಾಗಿತ್ತು. ₹ 100ಕ್ಕಿಂತಲೂ ಹೆಚ್ಚಾದ ಬಳಿಕ ಅಡುಗೆ ಸಾಮಗ್ರಿಯ ಪಟ್ಟಿಯಿಂದಲೇ ಉಳ್ಳಾಗಡ್ಡೆಯನ್ನು ದೂರವಿಡಲಾಗಿದೆ.</p>.<p>ಸದ್ಯಕ್ಕೆ ನಗರದ ವಿವಿಧ ಹೋಟೆಲ್ಗಳಲ್ಲಿ ಈರುಳ್ಳಿ ರಹಿತ ಪಾವ್ ಬಜ್ಜಿ, ಪಾನಿಪುರಿ, ಮಸಾಲೆಪುರಿ, ಸಾರು, ಸಾಂಬಾರು ಸಿಗುತ್ತಿದೆ.ಇದರಿಂದ ರುಚಿಯಲ್ಲಿ ವ್ಯತ್ಯಾಸವಾಗಿ ಹೋಟೆಲ್ ಸಿಬ್ಬಂದಿಜೊತೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುವುದು ನಿತ್ಯದ ದೃಶ್ಯವಾಗಿದೆ.</p>.<p>‘ನಮ್ಮ ಹೋಟೆಲ್ನಲ್ಲಿ ಪ್ರತಿದಿನ ಸುಮಾರು 25 ಕೆ.ಜಿ ಈರುಳ್ಳಿಬಳಕೆಯಾಗುತ್ತದೆ. ಈಗಿನ ದರದಲ್ಲಿ ಸುಮಾರು 50 ಕೆ.ಜಿ.ಗಳ ಒಂದು ಮೂಟೆ ಖರೀದಿಸಲು ₹ 7,500 ಬೇಕು. ದಿನದ ಲಾಭವನ್ನೂ ಮೀರಿ ಕೇವಲ ಒಂದೇ ವಸ್ತುವಿನ ಮೇಲೆ ವ್ಯಯಿಸಬೇಕು. ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ ಅವರಿಗೂ ಹೊರೆಯಾಗುತ್ತದೆ. ಹಾಗಾಗಿ ಇದು ಉದ್ಯಮಕ್ಕೆ ಸಾಧುವಲ್ಲ ಎಂದು ಸದ್ಯಕ್ಕೆ ಈರುಳ್ಳಿಖರೀದಿಯನ್ನುನಿಲ್ಲಿಸಿದ್ದೇವೆ. ದರ ಕಡಿಮೆಯಾದ ಬಳಿಕ ಮತ್ತೆ ಬಳಕೆ ಶುರು ಮಾಡುತ್ತೇವೆ’ ಎಂದು ನಗರದ ಗ್ರೀನ್ಸ್ಟ್ರೀಟ್ನ ಹೋಟೆಲೊಂದರ ಸಿಬ್ಬಂದಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>