‘ಅಡಿಯ ಗಿಡ ಸದೃಢವಾಗಿದ್ದರೆ, ಆಳದವರೆಗೆ ಬೇರೂರಿ, ಮಣ್ಣಿನಲ್ಲಿರುವ ಪೌಷ್ಟಿಕಾಂಶವನ್ನು ಎಳೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಯೋಜನೆಗೆ ಅನುಮತಿ ದೊರೆತಲ್ಲಿ, ಸ್ಥಳೀಯವಾಗಿ ಲಭ್ಯವಿರುವ ಒಂದೇ ಕುಟುಂಬದ ಗಿಡಗಳನ್ನು ಆಯ್ಕೆ ಮಾಡಿಕೊಂಡು, ಕಸಿ ಗಿಡಗಳನ್ನು ವ್ಯಾಪಕವಾಗಿ ಬೆಳೆಸಿ, ರೈತರಿಗೆ ನೀಡಲು ಸಾಧ್ಯವಾಗುತ್ತದೆ. ಸ್ವ ಸಹಾಯ ಸಂಘಗಳು, ಯುವಜನರಿಗೆ ತರಬೇತಿ ನೀಡುವ ಮೂಲಕ ಗ್ರಾಮ ಮಟ್ಟದಲ್ಲಿ ಕಸಿ ನರ್ಸರಿ ಹೆಚ್ಚಿದರೆ, ಒಟ್ಟಾರೆ ಉತ್ಪಾದನೆಯೂ ಹೆಚ್ಚುತ್ತದೆ’ ಎಂದು ಅವರು ಯೋಜನೆಯ ಉದ್ದೇಶವನ್ನು ‘ಪ್ರಜಾವಾಣಿ’ಗೆ ತಿಳಿಸಿದರು.