ಶಿರಸಿ: ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶದಂತೆ ಇಲ್ಲಿನ ಮಾರಿಕಾಂಬಾ ಜಾತ್ರಾ ಅಂಗಡಿಗಳು, ನಾಟಕ, ಸರ್ಕಸ್, ಮನರಂಜನಾ ಆಟಿಕೆಗಳ ಪಾರ್ಕ್ ಮುಚ್ಚಲಾಗಿದೆ. ಇದರಿಂದ ಇವುಗಳ ಮಾಲೀಕರು ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಇಲ್ಲಿ ಕೆಲಸ ಮಾಡುವವರಿಗೆ, ಹೊರ ಊರಿನಿಂದ ಬಂದಿರುವ ವ್ಯಾಪಾರಸ್ಥರಿಗೆ ನಿತ್ಯದ ಊಟಕ್ಕೂ ಸಮಸ್ಯೆ ಎದುರಾಗಿದೆ.