ತಾಲ್ಲೂಕಿನಲ್ಲಿ ಹಿಂಗಾರು ಭತ್ತ ನಾಟಿಯಾದ ಕೆಲವು ದಿನಗಳಲ್ಲಿ ಮಳೆ ಬಂದಿದ್ದರಿಂದ ಭತ್ತದ ಸಸಿಗೆ ನೀರಿನ ಅನುಕೂಲತೆಯಾಗಿದೆ. ಹಲವು ಪ್ರದೇಶಗಳಲ್ಲಿ ಶೇಂಗಾ, ಉದ್ದು, ಹೆಸರು ಬೆಳೆ ಬಿತ್ತನೆ ಮಾಡಿದ ಮರುದಿನವೇ ಮಳೆಯಾಗಿತ್ತು. ಕೆಲವೆಡೆ ಮಾತ್ರ ಬೀಜ ಕೊಳೆತು ಹಾನಿಯಾಗಿದೆ. ಆದರೆ, ಆ ಭಾಗದ ಕೃಷಿಕರು ಮಳೆ ನಿಂತ ಮೇಲೆ ಪುನಃ ಬಿತ್ತನೆ ಮಾಡಿದ್ದಾರೆ. ಈ ಮೂಲಕ ಮಳೆಯಿಂದ ಉಂಟಾದ ಮಣ್ಣಿನ ಪಸೆಯ ಲಾಭ ಪಡೆದುಕೊಂಡಿದ್ದಾರೆ.