ಕರಿಕಲ್ನ ಪೂಜಾ ಮಹೇಶ ನಾಯ್ಕ (17), ಕುಮಟಾ ಅಘನಾಶಿನಿಯ ನಾಗೇಂದ್ರ ದಾಸು ನಾಯ್ಕ (16) ಮತ್ತು ಕುಮಟಾ ಕೋನಳ್ಳಿಯ ದಿಲೀಪ್ ಬಾಬು ನಾಯ್ಕ (20) ಮೃತರು. ಪೂಜಾ, ಕುಮಟಾದ ನೆಲ್ಲಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಗಷ್ಟೇ ಪ್ರಥಮ ಪಿ.ಯು.ಸಿ ಅಧ್ಯಯನ ಪೂರ್ಣಗೊಳಿಸಿದ್ದಳು. ಕೋನಳ್ಳಿಯ ದಿಲೀಪ್ ಅವರ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಬೇಸಿಗೆ ರಜೆಯ ನಿಮಿತ್ತ ಮನೆಗೆ ಬಂದಿದ್ದಳು.