ಕಾಮಗಾರಿಯ ಸ್ಥಳದಲ್ಲಿಸೇರಿದನೂರಾರು ಪ್ರತಿಭಟನಾಕಾರರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಇಡ್ಲಿ ಸಾಂಬಾರ್ ಅಚ್ಛಾ ಹೈ, ಬಿಜೆಪಿ ಸರ್ಕಾರ್ ಲುಚ್ಛಾ ಹೈ’ ಎಂಬ ಘೋಷಣೆಯೊಂದಿಗೆ ತಮ್ಮ ಸಿಟ್ಟನ್ನು ಹೊರಹಾಕಿದರು. ತಮ್ಮ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಟೀಕಾಪ್ರಹಾರ ಮಾಡಿದರು.