ವಾದಿರಾಜ ಮಠದ ಶ್ರೀಭೂವರಾಹ, ಹಯಗ್ರೀವ, ವೇದವ್ಯಾಸ ದೇವರಿಗೆ ಹಾಗೂ ಶಿರೂರು ಮಠದ ರುಕ್ಮಿಣಿ ಸತ್ಯಭಾಮಾ ಸಹಿತ ವಿಠ್ಠಲ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ವಿಶ್ವವಲ್ಲಭ ತೀರ್ಥರು ನೆರವೇರಿಸಿದರು. ವಿಶ್ವವಲ್ಲಭ ತೀರ್ಥರು 15ನೇ ಚಾತುರ್ಮಾಸ್ಯ ಸಂಕಲ್ಪವನ್ನು, ರಘುವರೇಂದ್ರ ತೀರ್ಥ ಶ್ರೀಗಳು 12ನೇ ಚಾತುರ್ಮಾಸ್ಯ ಸಂಕಲ್ಪವನ್ನು ಭಾವಿಸಮೀರ ವಾದಿರಾಜರ ಪಂಚವೃಂದಾವನದ ಸನ್ನಿಧಿಯಲ್ಲಿ ಪೂರೈಸಿದರು.