ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ‘ಕಥಾಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನಗಳಿಗೆ ಕ್ರಮವಾಗಿ ₹ 6,000, ₹ 3,000, ₹ 2,000 ಹಾಗೂ ಮೆಚ್ಚುಗೆ ಬಹುಮಾನ ಪಡೆದ ಇಬ್ಬರಿಗೆ ತಲಾ ₹ 1,000 ಪ್ರದಾನ ಮಾಡಲಾಗುವುದು. ಉತ್ತಮ ಕಥೆ ಬರೆದ ಒಬ್ಬರು ಕಾಲೇಜು ವಿದ್ಯಾರ್ಥಿನಿಗೆ ₹ 2,000 ಬಹುಮಾನ ನೀಡಲಾಗುವುದು. ವಿಜೇತರಿಗೆ ಅಭಿನಂದನಾ ಪತ್ರವನ್ನೂ ವಿತರಿಸಲಾಗುವುದು’ ಎಂದರು.