ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿ ಅಲೆಗೆ ಸಿಕ್ಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ಭಾನುವಾರ ರಕ್ಷಣೆ ಮಾಡಿದ್ದಾರೆ.
ಬೆಂಗಳೂರು ಕತ್ರೆಗುಪ್ಪೆಯಿಂದ ಮುರ್ಡೆಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ವಿ.ಸಂಜಯ (18), ವಿ.ಸಂಜನಾ (15) ಹಾಗೂ ಕಾಂದಲಮ್ಮಾ(40) ಅಪಾಯದಿಂದ ಪಾರಾದವರು.