ತಾಲ್ಲೂಕಿನ ಹುಲೇಕಲ್ ಕೆಂಗ್ರೆಮಠದಲ್ಲಿ ಭಾನುವಾರ ನಡೆದ ಶ್ರೀ ಶಕ್ತಿ ಪಾರಂಪರಿಕ ವೈದ್ಯರ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವೈದ್ಯ ಶಾಸ್ತ್ರ ನಮಗೆ ಬದುಕನ್ನು ಕೊಡುತ್ತದೆ. ಅನ್ನಪ್ರಾಶನ ಮಾಡುವಾಗ ತಾಯಿ ಮೊದಲ ತುತ್ತಿನಲ್ಲಿ ವನಸ್ಪತಿಯ ರಸವನ್ನು ಕೊಟ್ಟು, ಆರೋಗ್ಯ ಕಾಪಾಡಿಕೊಳ್ಳುವಂತೆ ಹಾರೈಸುತ್ತಾಳೆ. ಒಂದೆಲಗ, ಕಾಳುಮೆಣಸು, ಬಜೆ ಇವನ್ನು ಚಿಕ್ಕಂದಿನಿಂದ ನಮಗೆ ಕೊಟ್ಟು ನಿಸರ್ಗದ ಜೊತೆ ಬದುಕನ್ನು ಕಲಿಸುತ್ತಾಳೆ’ ಎಂದರು.